SUDDILIVE || SHIVAMOGGA
ಶಾಲಾ ಮಕ್ಕಳ ಸುರಕ್ಷತೆಗಾಗಿ ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಮಹತ್ತರ ಸಭೆ-A major meeting led by DySP Sanjeev Kumar for the safety of school children
ನಿನ್ನೆ ಸಂಜೆ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಬಸ್ ವ್ಯವಸ್ಥೆ ಹೊಂದಿರುವ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆಯನ್ನು ನಡೆಸಲಾಗಿದೆ.
ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ತರ ತ್ರೀರ್ಮಾನಗಳನ್ನ ತೆಗೆದುಕೊಳ್ಳಲಾಯಿತು. 1. ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಇರುವ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಗಳನ್ನು ಪಾಲನೆ ಮಾಡಬೇಕು.
ಶಾಲಾ ವಾಹನಕ್ಕೆ ಕಡ್ಡಾಯವಾಗಿ ಸ್ವೀಡ್ ಗರ್ವನರ್ ಅಳವಡಿಸಬೇಕು. ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವುದು. ಶಾಲಾ ವಾಹನದ ನಿಗಧಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕೆರೆದುಕೊಂಡು ಹೋಗದಂತೆ ಸಭೆಯನ್ನ ತೀರ್ಮಾನಿಸಲಾಯಿತು.
ಶಾಲಾ ವಾಹನಗಳಿಗೆ ಕನಿಷ್ಠ 4 ವರ್ಷದ ಅನುಭವವುಳ್ಳ ಚಾಲನಾ ಪರವಾನಿಗೆ ಹೊಂದಿರುವ ಚಾಲಕರನ್ನು ನೇಮಕಮಾಡಿಕೊಳ್ಳುವುದು. ಶಾಲಾ ಆಡಳಿತ ಮುಖ್ಯ ಸ್ಥರು ಮತ್ತು ಸಂಚಾರ ಪೊಲೀಸ್ ರವರುಗಳನ್ನ ಒಳಗೊಂಡ ಒಂದು ವಾಟಪ್ಸ್ ಗ್ರೂಪ್ ರಚನೆ ಮಾಡುವ ಬಗ್ಗೆ ಮತ್ತು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರ ಬಗ್ಗೆ ತಿಳಿಸಲಾಯಿತು.
ಸದರಿ ಸಭೆಯಲ್ಲಿ, ಸಂಚಾರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಿಕ ದೇವರಾಜ್, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ನವೀನ್ ಕುಮಾರ್ ಮಠಪತಿ ಮತ್ತು ಶಿವಣ್ಣನವರ್ ಪಿಎಸ್ಐ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಉಪಸ್ಥತರಿದ್ದರು.
A major meeting led by DySP Sanjeev Kumar