SUDDILIVE || BHADRAVATHI
ಭದ್ರಾವತಿಯಲ್ಲಿ ಗೋಹತ್ಯೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ-Demand for strict action against cow slaughter in Bhadravati
ಗೋ ಕಳ್ಳತನ ಗೋ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಿನ್ನೆ ಹಿಂದೂ ಜಾಗರ ವೇದಿಕೆಯ ಜಿಲ್ಲಾ ಸಂಯೋಜಕ ದೇವರಾಜ್ ಅರಳಹಳ್ಳಿ, ರೈತರು ಹಾಗೂ ಜೆಡಿಎಸ್ ನಾಯಕರ ಅಜಿತ್ ಗೌಡರ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಎದುರು ಜಮಾಗೊಂಡು ತಮ್ಮ ಬೇಡಿಕೆಯನ್ನ ಇಟ್ಟಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಭದ್ರಾವತಿ ನ್ಯೂಟನ್ ಪೊಲೀಸ್ ಠಾಣೆ ಲಿಮಿಟ್ನ. ಜಿಂಕ್ ಲೈನ್ ಮತ್ತು ಹೊಸ ಸಿದ್ದಾಪುರದಲ್ಲಿ ಐದು ಮನೆಗಳಲ್ಲಿ 13 ಹಸುಗಳನ್ನು ಕಳ್ಳತನ ಮಾಡಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಲಿಮಿಟ್ ನ ದೊಡ್ಡಗಟ್ಟೆಯಲ್ಲಿ ಕಳ್ಳತನವಾಗಿರುವ ಎಲ್ಲಾ ಗೋವುಗಳನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟವರನ್ನು. ನ್ಯೂಟೌನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಗೋಕಳ್ಳತನ ಆಗಬಾರದೆಂದರೆ ಭದ್ರವತಿಯಲ್ಲಿ ಅಕ್ರಮ ಗೋವಿನ ಕಸಾಯಿಕಾನೆಗಳನ್ನು ಸಂಪೂರ್ಣ ನಿಲ್ಲಿಸಬೇಕೆಂದು ಜಮಾವಣೆಗೊಂಡ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Demand for strict action against cow slaughter in Bhadravati