ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯ ಟಿಪ್ಪಣಿ ಹಾಕಿ ಸರ್ಕಾರಿ ಅಧಿಕಾರಿ ಕ್ಷಮೆ ಯಾಚಿಸಿದ್ರಾ?official apologize

SUDDILIVE || SHIVAMOGGA

ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯ ಟಿಪ್ಪಣಿ ಹಾಕಿ ಸರ್ಕಾರಿ ಅಧಿಕಾರಿ ಕ್ಷಮೆ ಯಾಚಿಸಿದ್ರಾ?Did a government official apologize for posting a derogatory comment about Muslim women on social media?



ಸೋಶಿಯಲ್  ಮೀಡಿಯಾದಲ್ಲಿ ಮುಸ್ಲಿಂ ಮಹಿಳೆಯರ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅಪಮಾನಕರ ಮತ್ತು ನಿಂದನೀಯ ಟಿಪ್ಪಣಿ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೆಪಿಟಿಸಿಎಲ್‌ನ ಒಬ್ಬ ಸರ್ಕಾರಿ ನೌಕರೊಬ್ಬರು ಕ್ಷಮೆ ಕೋರಿರುವ ಘಟನೆ ವರದಿಯಾಗಿದೆ.  

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ ಅಡು ಅವರು ಡಿವೈಎಸ್ಪಿಗೆ  ದೂರು ನೀಡಿದ್ದರಿಂದ ಡಿವೈಎಸ್ಪಿಯ ಮುಂದೆ ಈ ಪ್ರಕರಣ ಕ್ಷಮೆಯೊಂದಿಗೆ ಪ್ರಕರಣ ಇತ್ಯಾರ್ಥಗೊಂಡಿದೆ.


ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. 


18 ಮೇ 2026 ರಂದು ಶಿವಮೊಗ್ಗದ ಆಲ್ಕೋಳ ಸರ್ಕಲ್‌ನ ಬಳಿ ಇರುವ ವಿಶಾಲ್ ಮಾರ್ಟ್‌ನಲ್ಲಿ ಲಿಫ್ಟ್‌ನಲ್ಲಿ 9 ಮಂದಿ ಸಿಕ್ಕಿಹಾಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಯಶಸ್ವಿಯಾಗಿ ರಕ್ಷಿಸಿದ್ದರು. ಈ ಘಟನೆಯ ವಿಡಿಯೋ ಮತ್ತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತು. 

ಈ ಸುದ್ದಿಯ ಅಡಿಯಲ್ಲಿ ‘ಸ್ರೋಮಂಗ್ಲ’ ಎಂಬ ಫೇಸ್‌ಬುಕ್‌ ಖಾತೆಯಿಂದ ಮುಸ್ಲಿಂ ಸಮುದಾಯ ಮತ್ತು ವಿಶೇಷವಾಗಿ ಮುಸ್ಲಿಂ ಮಹಿಳೆಯರ ವಿರುದ್ಧ ಅಸಭ್ಯ ಮತ್ತು ಉತ್ತೇಜಕ ಟಿಪ್ಪಣಿ ಪೋಸ್ಟ್‌ ಮಾಡಲಾಗಿತ್ತು ಎಂದು ದೂರಿನಲ್ಲಿ ಅಡು ದೂರಿದ್ದರು.

ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತ ಎಲ್ಲಾ ಮುಸ್ಲಿಂ ಸಮುದಾಯದವರಿಂದ ಕ್ಷಮೆ ಯಾಚಿಸಿದ್ದಾರೆ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

ಆದರೆ ಕ್ಷಮೆಯಾಚನೆಯ ನಂತರವೂ ದೂರು ಹಿಂಪಡೆಯಲಾಗಿಲ್ಲ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಡು  ಒತ್ತಾಯಿಸಿದ್ದಾರೆ.

Did a government official apologize for posting a derogatory comment about Muslim women on social media?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close