ಎನ್. ಗಣೇಶ್ ರಾವ್ ಪವಾರ್ ಇನ್ನಿಲ್ಲ


ಸುದ್ದಿಲೈವ್/ಶಿವಮೊಗ್ಗ


ಹಿರಿಯ ಸ್ವಾತಂತ್ರ್ಯ ಹೋರಾಟಗಾರರು,ಸರ್ವಾಸಿದ್ಧಿ ವಿನಾಯಕ ಸೇವಾ ಸಮಿತಿ ರಾಮಣ್ಣಶೆಟ್ಟಿ ಪಾರ್ಕ್ ನ ಸಂಸ್ಥಾಪಕ ಸದಸ್ಯರು ಹಾಗೂ ನಿವೃತ್ತ ಪಿಯರ್ ಲೈಟ್ ಲೈನರ್ ನ ಉದ್ಯೋಗಿಗಳಾದ ಎನ್. ಗಣೇಶ್ ರಾವ್ ಪವಾರ್ ರವರು ನಿಧನರಾಗಿದ್ದಾರೆ. 


 ದಿನಾಂಕ 7 ರ ಶನಿವಾರದಂದು ಬೆಂಗಳೂರಿನಲ್ಲಿ ನಿಧನ ಹೊಂದಿದ ಶ್ರೀಯುತರಿಗೆ, 97ವರ್ಷದ ವಯಸ್ಸಾಗಿತ್ತು.  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಚಿಕ್ಕಮಂಗಳೂರಿನ ಸೆರೆಮನೆವಾಸ ವನ್ನ ಅನುಭವಿಸಿದ್ದರು. ಅವರಿಗೆ 2ಗಂಡು ಮಕ್ಕಳು, 2ಹೆಣ್ಣು ಮಕ್ಕಳಿದ್ದಾರೆ.  ಅಪಾರ ಬಂಧು ಬಳಗ ವನ್ನೂ ಶ್ರೀಯುತರು ಬಿಟ್ಟು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close