ಕರವೇ ಸ್ವಾಭಿಮಾನಿ ಬಳಗದಿಂದ ವಾಟರ್ ಬೋರ್ಡ್ ಅಧಿಕಾರಿಗಳಿಗೆ ಮನವಿ



ಸುದ್ದಿಲೈವ್/ಶಿವಮೊಗ್ಗ

ಇಂದು ಕರ್ನಾಟಕ ಹಿತರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಮಧುಸೂಧನ್ ಎಸ್.ಎಂ ರವರ ನೇತೃತ್ವದಲ್ಲಿ ಇಂದು ಭೇಟಿ ಮಾಡಿ ಎಇಇ ಮಿಥುನ್ ಗೆ ಮನವಿ ಸಲ್ಲಿಸಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ಸರಬರಾಜಾಗುತ್ತಿರುವ  ಕುಡಿಯುವ ನೀರು ಮಣ್ಣು ಮಿಶ್ರಿತ ನೀರಾಗಿದ್ದು, ಈ ಕುಡಿಯುವ ನೀರಿನಿಂದ ಸಾರ್ವಜನಿಕರು ಹಾಗೂ ಮಕ್ಕಳು ಆನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಇದಕ್ಕೆ ನೇರ ಹೊಣೆ ಜಲಮಂಡಳಿಯವರಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. 

ಶುದ್ಧಿಕರಣ ಘಟಕದಲ್ಲಿರುವ ಮೂರು ಕ್ಲಾರಿ ಪ್ಲಕ್ಟುವೇಟರ್ ಕೆಲಸ ನಿಲ್ಲಿಸಿ ಎರಡು ತಿಂಗಳಾಗಿದೆ. ನೀರು ಶುದ್ಧ ಕರಣದಲ್ಲಿ ಶೇಕಡ 85% ರಷ್ಟು ಶುದ್ಧಿಕರಣವಾಗುವುದೇ ಇಲ್ಲಿ. ಲ್ಯಾಬ್ ಟೆಸ್ಟಿಂಗ್ ಇಕ್ಯೂಪ್ಲೇಂಟ್ಸ್ ಕೆಲಸ ಮಾಡುತ್ತಿರಲ್ಲಿಲ್ಲ. ಲ್ಯಾಬ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ 'ಇದೇ ಕಾರಣದಿಂದಲೇ ನದಿ ನೀರು ಇಷ್ಟು ಮಣ್ಣು ಮಿಶ್ರಿತವಾಗಿ ಬರುತ್ತಿದೆ. ನೀರು ಶುದ್ಧಿಕರಣಕ್ಕೆ ಆಲಂ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿಲ್ಲ ಎಂದು ದೂರಿದೆ. 

ನೀರಿಗೆ ಕ್ಲೋರಿಂಗ್ ಮಿಕ್ಸ್ ಮಾಡಲು ಅಳತೆಯ ಎರಡು ಗೇಜ್‌ಗಳು ಹಾಳಾಗಿದ್ದು ಅವೈಜ್ಞಾನಿಕವಾಗಿ ಕ್ಲೋರಿನ್ ನೀರಿಗೆ ಸೇರಿಸಲಾಗುತ್ತಿದೆ. ಹೀಗೆ ನೀರು ಸರಬರಾಜು ಮಂಡಳಿ ನಿರ್ವಹಣೆಗೆ ವಿಪಲವಾಗಿರುವುದೇ ಈ ರೀತಿ ಕೊಳಕು ನೀರು ಸರಬರಾಜು ಆಗಲು ಕಾರಣವಾಗಿದೆ. ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು 24x7 ಬಿಡುವ ನೀರಿನ ನಿಗದಿತ ಸಮಯವು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. 

ವಾಟರ್ ಬೋರ್ಡ್ ಅಧಿಕಾರಿಗಳು  ಸಾರ್ವಜನಿಕರಿಗೆ ಅನುಕೂಲವಾಗುವಂತೆ ತುರ್ತು ಕ್ರಮವಾಗಿ ಕಾರ್ಯ ನಿರ್ವಹಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close