ಸುದ್ದಿಲೈವ್/ಶಿವಮೊಗ್ಗ
ನಗರದ ಜೆಎನ್ ಎನ್ ಸಿ ಇ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಐಇಇಇ ಬೆಂಗಳೂರು ಮತ್ತು ಮಂಗಳೂರು ವಿಭಾಗ ಐಇಟಿಇ ಕೇಂದ್ರ, ಐಇಇಇ ಕಾಮ್ ಸಾಕ್ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಮಲ್ಟಿಮೀಡಿಯಾ ಪ್ರೋಸೆಸಿಂಗ್ ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕುರಿತ ನಾಲ್ಕನೇ ಅಂತರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಡಿ.13 ಮತ್ತು 14 ರಂದು ಎರಡು ದಿನಗಳ ಕಾಲ ಕಾಲೇಜಿನ ಸರ್ ಎಂ.ವಿ ಸಭಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜೆಎನ್ ಎಸ್ ಸಿ ಇ ಪ್ರಾಂಶಿಪಾಲ ವಿಜಯ ಕುಮಾರ್, ಡಿ.13 ರ ಶುಕ್ರವಾರ ಬೆಳಗ್ಗೆ 10.00 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಆಸ್ಟ್ರೇಲಿಯಾ ಡಿಕಿನ್ ವಿಶ್ವವಿದ್ಯಾಲಯದ ಡಾ.ಗ್ಯಾಂಗ್ ಲಿ. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವಾನುದೇವ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡಾ.ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿರಲಿದ್ದಾರೆ ಎಂದರು.
ಡಿ.14 ರ ಶನಿವಾರ ಸಂಜೆ 04.00 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ತೇಜಸ್ ನೆಟ್ ವರ್ಕ್ ಉಪಾಧ್ಯಕ್ಷ ಅನಿನ್ಧ್ಯ ಸಹ, ಇನ್ಫೋಸಿಸ್ ಕಂಪನಿ ಸಹ ಉಪಾಧ್ಯಕ್ಷೆ ಜ್ಞಾನಪ್ರಿಯಾ, ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು. ಕ್ವಾಂಟಮ್ ಇನ್ಸಾರ್ಮೇಷನ್ ಟೆಕ್ನಾಲಜಿ ಫೋಟೊಸಿಕ್ಸ್ ಕುರಿತು ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ. ಇಂಟರ್ನೆಟ್ಗಾಗಿ ಟ್ರಾನ್ಸ್ ಪೋರ್ಟ್ ಸರ್ವಿಸಸ್, ಎಪಿಐ ಪ್ರಮಾಣಿತ ವಿಷಯ ಕುರಿತು ನಾರ್ವೆ ಓಪ್ಲೊ ವಿಶ್ವವಿದ್ಯಾಲಯದ ಪ್ರೊ.ಮೈಕಲ್ ವೆಲ್ಜಿ, ಟಿಸಿಪಿ ರೂಟರ್ ಬಳಸಿ ಅಗ್ರಿಗೇಟಿಂಗ್ ಮಲ್ಟಿಪಲ್ ಇಂಟರ್ನೆಟ್ ಕನೆಕ್ಷನ್ ಕುರಿತು ಎನ್ಐಟಿಕೆ ಸೂರತ್ನಲ್ ಪ್ರಾಧ್ಯಾಪಕ ಡಾ.ಮೊಹಿತ್.ಪಿ.ತಾಲಿನಿ,
ಸೈಬರ್ ಪ್ರಾವಾಖಾಂಡದ ಸ್ಟ್ರಾಟೆಜಿಕ್ ಸುಪ್ರಷನ್ ಕುರಿತು ಅಸ್ಟ್ರೇಲಿಯಾದ ಡಿಕಿನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗ್ಯಾಂಗ್ ಲಿ. ಇನೊವೇಷನ್ ಮೈಂಡ್ ಸೆಟ್ ಕುರಿತು ಜ್ಞಾನಪ್ರಿಯ, ವೈರ್ಲಿಸ್ ನೆಟ್ವರ್ಕ್ ಮೂಲಕ ಎಐ ಮತ್ತು ಎಂಎಲ್ ಲರ್ನಿಂಗ್ ಕುರಿತು ತೇಜಸ್ ನೆಟ್ವರ್ಕ್ ಉಪಾಧ್ಯಕ್ಷ ಅನಿನ್ಧ್ಯ ಸಹ ಮಾತನಾಡಲಿದ್ದಾರೆ.
ಇದೇ ವೇಳೆ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಸಂಶೋಧನಾರ್ಥಿಗಳ ಆಯ್ದ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ ಎಂದರು.