ಮಹಿಳೆಯ ವ್ಯಾನಿಟಿ ಬ್ಯಾಗ್ ಕಳುವು



ಸುದ್ದಿಲೈವ್/ಶಿವಮೊಗ್ಗ

ಈ ವರ್ಷದ ಅಂತ್ಯಕ್ಕೆ ಎರಡು ಮೂರು ದಿನಗಳು ಬಾಕಿ ಉಳಿದಿದ್ದು, ಈ ವರ್ಷವೂ ಸಹ 10-12 ಪ್ರಕರಣ ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ದಾಖಲಾಗಿದೆ.

ಶಿವಮೊಗ್ಗದ ಆರ್ ಎಂ ಎಲ್ ನಗರದ ನಿವಾಸಿ 53 ವರ್ಷದ ಮಹಿಳೆ ಡಿ.27 ರಂದು  ಹರಿಹರದಿಂದ ಶಿವಮೊಗ್ಗಕ್ಕೆ ಬಂದು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಜನ ರಶ್ ಆದ್ದರಿಂದ ಅವರ ವ್ಯಾನಿಟಿ ಬ್ಯಾಗ್ ಕಳುವಾಗಿದೆ.  

ವ್ಯಾನಿಟಿ ಬ್ಯಾಗ್ ನಲ್ಲಿ ಒಟ್ಟು 2,24,000 ಮೌಲ್ಯದ ಮಾಂಗಲ್ಯ ಸರ, ಉಂಗುರ ನಗದುಗಳನ್ನ ಕಳುವು ಮಾಡುವ ಜೊತೆಗೆ, ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಶುಗರ್ ಮಾತ್ರೆಗಳನ್ನ , ಮನೆಯ ಬೀಗಗಳಿದ್ದವು ಎಂದು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close