ಪಾಲಿಕೆಯ ಮುತ್ತಿಗೆಯ ಎಚ್ಚರಿಕೆ!



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರ ಪಾಲಿಕೆಯನ್ನು ಭಗವಂತೆನೇ ಕಾಪಾಡಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶದಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ‌.ರಾಜ್ಯದಲ್ಲಿ ಸರ್ಕಾರ ಇದೆಯೋ ಸತ್ತಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಗೊತ್ತಿಲ್ಲ. ನಯ ಪೈಸೆ ಕಾಮಗಾರಿಗಳು ನಡೆಯುತ್ತಿಲ್ಲ. ಶಿವಮೊಗ್ಗದಲ್ಲೂ ಯಾವುದೇ ಒಂದು ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. 

ಆಶ್ರಯ ಮನೆ ವಿಚಾರದಲ್ಲಿ ಜನರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಉಸ್ತುವಾರಿ ಸಚಿವರಿಗೆ ಕೇವಲ 15 ಕೋಟಿ ತರಲು ಹೆಣಗಾಡುತ್ತಿದ್ದಾರೆ ಎಂದರೆ ಸರ್ಕಾರ ಬದುಕಿದ್ಯಾ? ಎಂದು ಪ್ರಶ್ನಿಸಿದರು. 

ರಸ್ತೆ ಇಲ್ಲ, ನೀರಿಲ್ಲ, ಈಸ್ವತ್ತು ಪಡೆಯಲು ಜನರ ಪರದಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಪಾಲಿಕೆ‌ಮುತ್ತಿಗೆ ಹಾಕಬೇಕಾಗುತ್ತದೆ‌ ಎಂದು ಎಚ್ಚರಿಸಿದರು. 

ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವಕ್ಕೆ ವಿಚಾರದಲ್ಲೂ ಪ್ರತಿಕ್ರಿಯಿಸಿದ ಈಶ್ವರಪ್ಪ, ಫೆ 4 ರಂದು ಬಸವನ ಬಾಗೇವಾಡಿಯಲ್ಲಿ ಇದರ ಉದ್ಘಾಟನೆ ನೆರವೇರಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close