ವಿವಾಹಿತ ಮಹಿಳೆಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ-ದೂರು ದಾಖಲು


ಸುದ್ದಿಲೈವ್/ಸೊರಬ

ಅನ್ನದ ಗಂಜಿಯನ್ನ ಮನೆಯ ಹೊರಗಡೆ ಚೆಲ್ಲಿ ಬರುವ ವೇಳೆ ವಿವಾಹಿತ ಮಹಿಳೆಯನ್ನ ತಬ್ಬಿಕೊಂಡು ಅಸಭ್ಯವರ್ತನೆ ತೋರಿದ ಘಟನೆ ವರದಿಯಾಗಿದೆ. ಸೊರಬದ ಗುಡವಿ ಗಾಮ್ರದಲ್ಲಿ ಮಹಿಳೆ ಯೊಬ್ಬರಿಗೆ ಅಸಭ್ಯ ವರ್ತನೆ ತೊರಿ  ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಯುವಕನ ವಿರುದ್ದ ಪ್ರಕರಣ ದಾಖಲಾಗಿದೆ. 

ನಾಲ್ಕು ಮಕ್ಕಳೊಂದಿಗೆ ಹಾಗೂ ಗಂಡನ ಜೊತೆ ವಾಸವಾಗಿದ್ದ ವಿವಾಹಿತ ಮಹಿಳೆ ಜ.6 ರಂದು ಸಂಜೆ 7-30 ರ ವೇಳೆ ರಾತ್ರಿ ಊಟಕ್ಕೆ ಅನ್ನ ಮಾಡಲು ಮುಂದಾಗಿದ್ದಾರೆ. ಅನ್ನ ಬೇಯಿಸಿದ ಗಂಜಿಯನ್ನ ಮನೆಯ ಹಿತ್ತಲಿಗೆ ಹಾಕಲು ಹೋದ ವೇಳೆ ಯುವಕನೋರ್ವ ಹೊಂಚುಹಾಕಿ ಕುಳಿತಿದ್ದನು.

ಮಹಿಳೆ ಬರುತ್ತಿದ್ದಂತೆ ಯುವಕ ಆಕೆಯನ್ನ ಹಿಡಿದುಕೊಂಡು ತಬ್ಬಿಕೊಂಡಿದ್ದಾನೆ. ಮಹಿಳೆ ಕೂಗಿಕೊಂಡಾಗ ಮನೆಯ ಒಳಗಡೆ ಓದುತ್ತಿದ್ದ ಮಗಳು, ಅಕ್ಕಪಕ್ಕದವರು ಸಹಾಯಕ್ಕೆ ಬಂದಿದ್ದಾರೆ.ಸಹಾಯಕ್ಕೆ ಬಂದ ಜನರನ್ನ ಕಂಡು ಯುವಕ ಪರಾರಿಯಾಗಿದ್ದಾನೆ. 

ಪರಾರಿಯಾಗುವ ವೇಳೆ ಗಂಡನಿಗೆ ಈ ವಿಷಯ ತಿಳಿಸಿದರೆ ಸುಮ್ಮನೆ ಬಿಡಲ್ಲ. ನೀನು ನನಗೆ ಬೇಕು ಎಂದು ಹೇಳಿದ್ದಾನೆ. ಸಾಗರಕ್ಕೆ ತೆರಳಿದ್ದ ಗಂಡ ಮನೆಗೆ ವಾಪಾಸ್ ಬಂದ ನಂತರ ಚರ್ಚಿಸಿ ದೂರು ಕೊಡಲು ಮಹಿಳೆ ಮುಂದಾಗಿದ್ದಾರೆ. 

ಗಂಡ ಮನೇಲಿ ಇಲ್ಲದ ಸಂರ್ಧದಲ್ಲಿ  ಮಹಿಳೆಯ ವಿರುದ್ದ ಅಸಭ್ಯ ವರ್ತನೆ ತೊರಿ  ನನಗೆ ನಿನು ಬೇಕೆ ಬೇಕು ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ ಏಂದು ಹದೇ ಗಾಮ್ರದ ಯಶವಂತ ಅಲಿಯಸ ಕಾಮ ಪಿಚಾಚಿ ಮಹಿಳೆಗೆ ಕಿರುಕುಳ ನಿಡಿದ ಘಟನೆ ನಡೆದಿದೆ ಘಟನೆಗೆ ಸಂಬಂಧಿಸಿದಂತೆ  ಯಶವಂತ ವಿರುದ್ದ ಪ್ರಕರಣ ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close