ಖಾಸಗಿ ಬಸ್ ಏಜೆಂಟರ ಸಂಘದಿಂದ ದಯಾಮರಣಕ್ಕೆ ಕೋರಿ ಅರ್ಜಿ ಬರೆಯಲು ನಿರ್ಧಾರ

If the government does not respond to the problems of private bus owners and drivers, there is a strong possibility that the president will go on a protest demanding euthanasia.

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಬಸ್ ಮಾಲೀಕರ, ಚಾಲಕರ ಸಮಸ್ಯೆಗೆ ಸರ್ಕಾರ ಸ್ಪಂಧಿಸದೆ ಹೋದರೆ ರಾಷ್ಡ್ರಪತಿಗಳಿಗೆ ದಯಾಮರಣ ಕೋರಿ ಪ್ರತಿಭಟನೆಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.  

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ‌ ಸಾಗರದ ಖಾಸಗಿ ಬಸ್ ಗಳ ಮಾಲೀಕರ ಸಂಘದ ಮನವಿಗೆ ಸ್ಪಂಧಿಸದ ಹಿನ್ನಲೆಯಲ್ಲಿ ಈ ಪ್ರತಿಭಟನೆಗೆ ಇಳಿಯುವುದಾಗಿ ತಿಳಿಸಿರುವ ಖಾಸಗಿ ಬಸ್ ಏಜೆಂಟರ ಸಂಘದ ನಾಗರಾಜ್ ಗುಡ್ಡೇಮನೆ ಪರ್ಮಿಟ್ ಇಲ್ಲದ ಕೆಎಸ್ ಆರ್‌ಟಿ‌ಸಿ ಬಸ್ ಗಳನ್ನ ತಡೆಯುವಂತೆ ಮನವಿ ಸಲ್ಲಿಸಿದ್ದರು. 


ಈ ಮನವಿಗೆ  ಅಧಿಕಾರಿಗಳು ಸ್ಪಂಧಿಸದ ಇರುವ ಹಿನ್ನಲೆಯಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಸಾಗರದ ಎಸಿ ಕಚೇರಿಯ ಎದುರು ಬಸ್ ಗಳನ್ನ ನಿಲ್ಲಿಸಿ  ಮಾಲೀಕರು, ಚಾಲಕರು ಮತ್ತು ನಿರ್ವಹಕರ ಕುಟುಂಬ ಪ್ರತಿಭಟಿಸಿ ಸ್ಥಳದಲ್ಲಿಯೇ ರಾಷ್ಟ್ರಪತಿಗಳಿಗೆ ದಯಾಮರಣದ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. 

ಈ ಕುರಿತು ನಾಳೆ ಮಾಲೀಕರ ಸಭೆ ನಡೆಯಲಿದ್ದು ಫೆ. 21 ಅಥವಾ 28 ರಂದು ಪ್ರತಿಭಟನೆ ನಡೆಸುವ ಬಗ್ಹೆ ನಿರ್ಧಾರ ಕೈಗೊಳ್ಳುವುದಾಗಿ ಅಷ್ಟರೊಳಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close