Suddilive || Shivamogga
ಮನೆಗಳ್ಳ ಆರೋಪಿಗಳ ಬಂಧನ-Arrest of house burglary suspects
ಮನೆಗಳ್ಳತನದ ಪ್ರಕರಣವನ್ನ ಹೊಸನಗರ ತಾಲೂಕಿನ ನಗರ ಪೊಲೀಸರು ಬೇಧಿಸಿದ್ದಾರೆ. ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.
ಮಾ.3 ರಂದು ನಗರ ಹೋಬಳಿಯ ದೊಡ್ಮನೆ ಮತ್ತಿಕೈ ನಿವಾಸಿಯಾದ ಪರಮೇಶ್ವರ ಎಂ ಎಸ್(65) ಎಂಬುವರು ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬಲ ಭಾಗದ ಮರದ ಬಾಗಿಲನ್ನು ತೆಗೆದು ಒಳ ಪ್ರವೇಶಿಸಿ ಮನೆಯ ಬೆಡ್ರೂಮಿನ ಕಪಾಟಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಸರ ಹಾಗೂ ರೂ 15,000/- ನಗದು ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತೋರ್ವ ಅಡಿಷನಲ್ ಎಸ್ಪಿಗಳಾದ ಕಾರಿಯಪ್ಪ ಎ. ಜಿರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎನ್ ಕಲಗುಚ್ಚಿ ಮೇಲ್ವಿಚಾರಣೆಯಲ್ಲಿ ಹೊಸನಗರ ಸಿಪಿಐ ಗುರಣ್ಣ ಹೆಬ್ಬಾರ್ ರವರ ನೇತೃತ್ವದಲ್ಲಿ ಪಿಎಸ್ಐ ಶಿವಾನಂದ ವೈ. ಕೆ. ಪಿಎಸ್ಐ ನಗರ ಪೊಲೀಸ್ ಠಾಣೆ, ಕುಮಾರ್ ಟಿ ಎ ಎಸ್ ಐ, ಶ್ರೀ ಶೇಕ್ ಅಮೀರ್ ಜಾನ್ ಎಎಸ್ಐ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ. ಶ್ರೀ ಕಿರಣ್, ಶ್ರೀ ವಿಶ್ವನಾಥ್, ಶ್ರೀ ಪ್ರವೀಣ್ ಕುಮಾರ್, ಶ್ರೀ ವಿಶ್ವನಾಥ್, ಸಿಪಿಸಿ ರವರಾದ ಶ್ರೀ ರವಿಚಂದ್ರ, ಶ್ರೀ ಸುಜಯ್ ಕುಮಾರ್, ಶ್ರೀ ಪ್ರಜ್ವಲ್ ಡಿ ಎಸ್ ಮತ್ತು ಸಚಿನ್ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತು.
ತನಿಖಾ ತಂಡವು ದಿನಾಂಕ 20-03-2025 ರಂದು ಪ್ರಕರಣದ ಆರೋಪಿತನಾದ ಕೆ ಆರ್ ಶರತ್ ಕುಮಾರ್, 26 ವರ್ಷ, ಜೀಪ್ ಚಾಲಕ ವೃತ್ತಿ, ಕಟ್ಟಿನಹೊಳೆ ಗ್ರಾಮ, ಮತ್ತಿ ಕೈ, ಹೊಸನಗರ ಈತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,00,000/- ರೂಗಳ 12 ಗ್ರಾಂ ಚಿನ್ನದ ಸರ ಹಾಗೂ ಅಂದಾಜು 65,000/- ರೂ ಮೌಲ್ಯದ ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರವಾಹನ ವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ.
Arrest of house burglary suspects