SUDDILIVE || SHIVAMOGGA
ಹೈಕಾರ್ಟ್ ನಿರ್ದೇಶನದ ಮೇಲೆ ಚುನಾವಣೆ-ಆಯುಕ್ತರು-Election on the directions of the High Court
ಹೈಕೋರ್ಟ್ ನಿರ್ದೇಶನದ ಮೇರೆಗೆ ಪಾಲಿಕೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಾಗಿ ಕರ್ನಾಕ ರಾಜ್ಯ ಚುನಾವಣ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಚುಟುಕು ಸಭೆ ನಡೆಸಿದ ಆಯುಕ್ತರು ಕಳೆದ ಆಗಸ್ಟ್ ನಲ್ಲಿ ಚುನಾವಣೆ ನಡೆಸಲಾಗಲು ಆಗಲಿಲ್ಲ. ಬಾಡಿ ಇಲ್ಲದೆ ಅಧಿಕಾರಿಗಳಿಂದ ನಡೆಯುತ್ತಿದೆ. ಶಾಸಕರು ನತ್ತು ಎಂಎಲ್ ಸಿ ಗಳು ಬೇಟಿಯಾಗಿ ಚುನಾವಣೆ ಮಾಡಲು ಹೇಳಿದ್ದರು. ಮತದಾರ ಪಟ್ಟಿ ನೀಡುವಂತೆ ಸರ್ಕಾರಕ್ಕೆ ಕೇಳಿತ್ತು. ಕೊಡಲಿಲ್ಲ. ಸರ್ಕಾರದ ವಿರುದ್ಧ ಹೈಕೊರ್ಟ್ ಗೆ ರಿಟ್ ಹಾಕಿದ್ದೇವೆ.
ಕೋರ್ಟ್ ರಜೆ ಇರುವುದರಿಂದ ಮುಂದಿನ ತಿಂಗಳು ವಿಚಾರಣೆ ನಡೆದು ಚುನಾವಣೆ ನಡೆಸುವ ಬಗ್ಗೆ ನಡೆಯಲಿದೆ. ಸರ್ಕಾರ ಸ್ಪಂಧಿಸಿದರೆ ಮತದಾರ ಪಟ್ಟಿ ತಯಾರಿ ಮಾಡಿಕೊಳ್ಳಲು ಅನುಕೂಲವಾಗಲಿದೆ. ಚುನಾವಣೆ ಯಾವಾಗ ಎಂಬುದು ಹೇಳಲು ಸಾಧ್ಯವಿಲ್ಲ. ಚುನಾವಣೆ ವೇಳೆ ಮತ್ತೆ ಭೇಟಿಯಾಗೊಣ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, 2011 ರ ಪ್ರಕಾರ 3.22 ಲಕ್ಷ ಜನ ಸಂಖ್ಯೆಯಿತ್ತು ಈಗ 27% ಹೆಚ್ಚಾಗಿದೆ. 4.05 ಲಕ್ಷ ಜನಸಂಖ್ಯೆ ನಗರ ಪಾಲಿಕೆಯಲ್ಲಿದ್ದಾರೆ. 288 ಪೊಲೀಸ್ ಸ್ಟೇಷನ್ ಆಗಿದೆ ರೂರಲ್ ನಲ್ಲಿ 17 ಪೋಲಿಂಗ್ ಸ್ಟೇಷನ್ ಸೇರಿ 305 ಪೊಲೀಂಗ್ ಸ್ಟೇಷನ್ ಆಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಒಉನರ್ ವಿಂಗಡಣೆ ಆಗಿದೆ ಸರ್ವೆ ಆಗಿದೆ.
ವಾರ್ಡ್ ವೈಸ್ ಚುನಾವಣೆ ಮಾಡಲು ಸೂಕ್ಷ್ಮವಾಗಿರುವುದರಿಂದ ಮತದಾರ ಪಟ್ಟಿ ಸರಿಪಡಿಸಿಕೊಳ್ಳಬೇಕು ಎಂದು ತಮ್ಮ ಅಧಿಕಾರಿಗಳಿಗೆ ತಿಳಿಸಿದರು.
Election on the directions of the High Court