SUDDILIVE || BANGALORE
ಆರ್ ಸಿಬಿ ವಿಜಯೋತ್ಸವದಲ್ಲಿ 12 ಬಲಿ-12 killed in RCB victory celebration
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲು ತುಳಿತದಲ್ಲಿ 12 ಜನ ಸಾವನ್ನಪ್ಪಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿವೆ.
ವಿಜಯೋತ್ಸವದ ಭಾಗವಾಗಿ ಚಿನ್ನೆಸ್ವಾಮಿ ಕ್ರೀಡಾಂಗಣದೊಳಗೆ ನಡೆಯಲಿದ್ದ ಸಮಾರಂಭಕ್ಕೆ ಹಾಜರಾಗಲು ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ನಿರೀಕ್ಷೆಗೆ ಮೀರಿ ಜನ ಸೇರಿದ್ದರಿಂದ ಅಭಿಮಾನಿಗಳು ಕಾಲುತುಳಿತಕ್ಕೆ ಬಲಿಯಾಗಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ, 14 ವರ್ಷದ ಹಾಗೂ 6 ವರ್ಷದ ಬಾಲಕಿ ಸೇರಿ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ಪ್ರವೇಶದವರಿಗೂ ಜನ ಜಮಾಯಿಸಿದ್ದು ನೂಕು ನುಗ್ಗಾಗಲು ಉಂಟಾಗಿತ್ತು. ಜನಸಾಗರದ ಎದುರು ಸರ್ಕಾರದ ಎಲ್ಲಾ ವ್ಯವಸ್ಥೆಗಳು ತಾತ್ಕಾಲಿಕವಾಗಿ ನಿಯಂತ್ರಣ ಕಳೆದುಕೊಂಡಿತ್ತು. ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 20-30 ಮಂದಿ ಯುವಕರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ಪೊಲೀಸರು ಗಾಯಾಳುಗಳನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯಗಳು ಸಹ ಹೃದಯವಿದ್ರುಕವಾಗಿದೆ. ಇದು ದುರ್ಘಟನೆಯ ಭೀಕರತೆಯನ್ನು ಎತ್ತಿ ತೋರಿಸುತ್ತಿತ್ತು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದುರಂತದ ಬೆನ್ನೆಲೆ ತುರ್ತು ಸಭೆ ಕರೆದುಕೊಂಡ ಬೆಂಗಳೂರು ಪೊಲೀಸ್ ಇಲಾಖೆ ಸಂಭ್ರಮಾಚರಣೆಗೆ ಮುನ್ನ ಎಚ್ಚರಿಕೆ ನೀಡಲಾಗಿದ್ದರು ಜನಸಾಗರವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದನ್ನ ಒಪ್ಪಿಕೊಂಡಿದೆ.
ಭದ್ರತಾ ದೃಷ್ಟಿಯಿಂದ ಮೆರವಣಿಗೆ ನಿರ್ಧಾರವನ್ನು ಸರ್ಕಾರ ಮೊದಲೇ ರದ್ದುಗೊಳಿಸಿತು. ಅಭಿಮಾನಿಗಳ ಭಾರಿ ಲಗ್ಗೆಯಿಂದಾಗಿ ನಿಯಂತ್ರಣಕ್ಕೆ ಸಿಗದಿರುವುದು ದುರಂತವಾಗಿದೆ. ಐತಿಹಾಸಿಕ ಜಯವನ್ನು ಆಚರಿಸುವ ವೇಳೆ ಸೂತಕದ ಛಾಯೆ ಆವರಿಸಿದೆ. ನಾಡಿನಾದ್ಯಂತ ಶೋಕದ ಛಾಯೆ ಮೂಡಿಸಿದೆ. ವಿಪಕ್ಷ ನಾಯಕ ವಿಜೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ ಸಂಭ್ರಮಾಚರಣೆಯನ್ನು ಹೆಣದ ಮೇಲೆ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಡಿಸಿಎಂ ಡಿಕೆಶಿ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವಿಚಾರಿಸಿದ್ದಾರೆ. ಪೊಲೀಸರು ಉತ್ತಮಕೆಲಸ ಮಾಡಿದ್ದಾರೆ. ಲಾಠಿ ಹಿಡಿದು ಹೊಡೆದಿಲ್ಲ.ಆರ್ ಸಿಬಿ ಆಟಗಾರರನ್ನ ಗೌರವಿಸಿ ಕಾರ್ಯಕ್ತಮವನಗನ ಚುಟುಕಾಗಿ ಆಚರಿಸಿದ್ದೇವೆ ಎಂದು ಹೇಳಿದ್ದಾರೆ.
12 killed in RCB victory celebration