SUDDILIVE || SHIVAMOGGA
ಬೆಕ್ಕಿನಕಲ್ಮಠದ ಭಕ್ತರ ಬಲವಾದ ಆಕ್ಷೇಪಣೆ ಏನು ಗೊತ್ತಾ?Do you know what the strong objection of the devotees of Bekkinakal Matha is?
ಭವ್ಯ ಪರಂಪರೆ ಉಳ್ಳ ಬೆಕ್ಕಿನ ಕಲ್ಮಠಕ್ಕೆ ನಾಳೆ ಶಿಷ್ಯನನ್ನ ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ನಿತಿನ್ ಆರಾಧ್ಯರನ್ನ ಪೀಠದ ಮುಂದಿನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಅವರನ್ನ ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ಶಿವಯೋಗ ಮಂದಿರದಲ್ಲಿ ಸಿದ್ದಲಿಂಗ ದೇವರ ಧೀಕ್ಷಾ ಕಾರ್ಯಕ್ರಮದ ಹೆಸರಿನಲ್ಲಿ ನಡೆಯಲಿದೆ.
ನಾಳೆ ಪ್ರಾತಃ ಕಾಲದಲ್ಲಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಹಲವು ಸ್ವಾಮಿಗಳ ಹಾಜರಾತಿಯಲ್ಲಿ ಜರುಗಲಿದೆ. ಈ ಮಠ ಬೆಳವಣಿಗೆಗೆ ಮಲ್ಲಿಕಾರ್ಜುನ ಸ್ವಾಮಿಗಳ ಶ್ರಮ ಅಪಾರವಾಗಿದೆ. ಆದರೆ ಮಠದ ಉತ್ತರಾಧಿಕಾರವನ್ನ ನೇಮಿಸಿಕೊಳ್ಳುತ್ತಿರುವ ಬಗ್ಗೆ ಭಕ್ತವೃಂದದಿಂದ ಸಣ್ಣದಾದ ಆಕ್ಷೇಪಣೆಗಳು ಕೇಳಿಬರುತ್ತಿದೆ. ನಿತಿನ್ ಆರಾಧ್ಯ ಅವರು ಈಗಿನ ಮಲ್ಲಿಕಾರ್ಜುನ ಸ್ವಾಮಿಗಳ ಸಹೋದರ ಮಗನಾಗಿದ್ದು ಅವರನ್ನೇ ಉತ್ತರಾಧಿಕಾರಿಗಳನ್ನಾಗಿ ನೇಮಿಸಿರುವ ಬಗ್ಗೆ ಹಲವು ಭಕ್ತರ ಆಕ್ಷೇಪಣೆವಿದೆ.
ತಮ್ಮ ಸುತ್ತಮುತ್ತಲಿನ ಜನರ ಜೈಕಾರ ಹಾಕುವ ಭಕ್ತವೃಂಧದವರನ್ನೇ ನಿಜವಾದ ಭಕ್ತರೆಂದು ತಿಳಿದು ಅವರೊಂದಿಗೆ ಸಾಗಿದರೆ ಸ್ವಾಮಿಜಿಗಳಾಗುವುದಿಲ್ಲ. ಎಲ್ಲಾ ಭಕ್ತರನ್ನ ವಿಶ್ವಾಸಕ್ಕೆ ಪಡೆದು ಮುಂದಿನ ಸಾಧಕ ಬಾಧಕವನ್ನ ಚರ್ಚಿಸಿ ಮುನ್ನಡೆಯುವುದು ಸಹ ಮಠದ ಸ್ವಾಮಿಗಳ ಕೆಲಸವೂ ಹೌದು. ಈಗಿನ ಸ್ವಾಮಿಗಳಿಗೆ ಈ ತಿಳುವಳಿಕೆ ಅಪಾರವಾಗಿದೆ. ಈ ವಿಷಯದಲ್ಲಿ ಸ್ವಾಮಿಜಿಗಳು ಪ್ರಶ್ನಾತೀತರು.
ಆದರೆ ಇಲ್ಲಿ ಆಕ್ಷೇಪಣೆವೊಂದಿದೆ, ಮಠದ ಉತ್ತರಾಧಿಕಾರಿಗೆ ಈಗಿನ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಹೋದರ ಮಗನನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಭಕ್ತರ ಆಕ್ಷೇಪಣೆಯಿದೆ. ಈ ಮಠ ವಂಶಪಾರಂಪರ್ಯ ಮಠವೋ ಅಥವಾ ಶಿಷ್ಯವೃಂದದ ಮಠವೋ ಎಂಬುದು ಭಕ್ತರ ಪ್ರಶ್ನೆಯಾಗಿದೆ. ಮಲ್ಲಿಕಾರ್ಜುನ ಸ್ವಾಮಿಗಳೇ ಒಪ್ಪಿಕೊಳ್ಳುವಂತೆ ಮುರುಘ ಮಠ ಶಿಷ್ಯ ವೃಂದ ಮಠ ವಾಗಿರುವುದರಿಂದ ನಾಲ್ಕನೇ ತಲೆಮಾರಿನ ಉತ್ತರ ಅಧಿಕಾರಿಯಾಗಿ ಸ್ವಾಮಿಗಳ ಸಹೋದರರ ಮಗನನ್ನೇ ನೇಮಕ ಮಾಡಿಕೊಳ್ಳುವುದಕ್ಕೆ ಭಕ್ತರ ಆಕ್ಷೇಪಣೆ ಇದೆ.
ಈ ಕುರಿತು ಶಾಂತ ಕುಮಾರ ಗೌಡ್ರು ಆಚಾಪುರದವರು ಬಲವಾಗಿ ಆಕ್ಷೇಪಿಸಿದ್ದಾರೆ. ಈ ಮಠಕ್ಕೆ 19 ಸ್ವಾಮಿಗಳು ಬಂದು ಹೋಗಿದ್ದಾರೆ. ಇದರಲ್ಲಿ, ಸಚ್ಚಿದಾನಂದ ಸ್ವಾಮಿಗಳು, ಲಿಂಗಸ್ವಾಮಿಗಳು, ಈಗಿನ ಮಲ್ಲಿಕಾರ್ಜುನ ಸ್ವಾಮಿಗಳು ಒಂದೇ ಕುಟುಂಬದವರಾಗಿದ್ದಾರೆ. ಈಗಿನ ನಾಲ್ಕನೇ ತಲೆ ಮಾರು ಸಹ ಅದೇ ಕುಟುಂಬದವರಾಗಿರುವ ಬಗ್ಗೆ ಆಕ್ಷೇಪಣೆಯಿದೆ.
ಎರಡು ವರ್ಷದ ಹಿಂದೆ ಈಗಿನ ಸ್ವಾಮಿಗಳು ವಿಲ್ ಬರೆದು ಗುಪ್ತವಾಗಿಟ್ಟಿದ್ದಾರೆ. ಮುಂದಿನ ಉತ್ತರಾಧಿಕಾರಿಗಳು ಇವರೆ ಎಂದು ಬರೆದಿದ್ದಾರೆ. ಅದನ್ನ ಬಹಿರಂಗ ಪಡಿಸಿಲ್ಲ. ಮೇ26 ರಂದು ಆನಂದಪುರದ ಮಠದಲ್ಲಿ ಭಕ್ತರ ಸಭೆ ಕರೆದಿದ್ದರು. ಸಭೆಯ ಅಜೆಂಡಾ ಇಲ್ಲದೆ ಕರೆದಿದ್ದಾರೆ. ಈ ಅಜೆಂಡಾ ಇಲ್ಲದ ಸಭೆಯಲ್ಲಿ ಉತ್ತರಾಧಿಕಾರಿ ನೇಮಕದ ಪ್ರಸ್ತಾಪಿಸಿದ್ದಾರೆ. ಇದನ್ನಒಪ್ಪಲಾಗುತ್ತದಾ ಎಂಬ ಆಕ್ಷೇಪಣೆಯನ್ನ ಎತ್ತಿದ್ದಾರೆ.
ಮಠಕ್ಕೆ ನೂರಾರು ಕೋಟಿಯ ಆಸ್ತಿಯಿದೆ. ಈ ಆಸ್ತಿ ಬೇರೆಯವರ ಪಾಲಾಗುತ್ತದೆ ಎಂಬ ದುರುದ್ದೇಶದಿಂದ ಸ್ವಾಮಿಗಳ ಸಹೋದರ ಮಗನನ್ನ ನೇಮಿಸಲಾಗಿದೆ ಎಂಬುದು ಗೌಡರ ಆಕ್ಷೇಪಣೆಯಲ್ಲೊಂದು ಅಂಶವಾಗಿದೆ.
ಈ ಆಕ್ಷೇಪಣೆಯೇ ಕೆಲವರಿಗೆ ಬೇಸರ ಮತ್ತು ಸಿಟ್ಟು ತರಿಸಬಹುದು. ಬಹುತೇಕ ಮಠಗಳು ಇಂತಹ ವಂಶಪಾರ್ಯಂಪರದ ಮೊರೆ ಹೋಗುವುದು ಸಹಜ. ಆದರೆ ಮಠದ ಭಕ್ತರ ಆಕ್ಷೇಪಣೆಯಲ್ಲಿ ಯಾವ ತಪ್ಪಾರ್ಥವಿದೆ. ಇದು ಕೇವಲ ಒಬ್ಬರ ಭಕ್ತರ ಆಕ್ಷೇಪವಲ್ಲ. ಪ್ರಮುಖರಲ್ಲಿ ಒಬ್ಬರದು ಅಷ್ಟೆ. ನಾಳೆಯ ಸೂರ್ಯ ಹುಟ್ಟುವ ಹೊತ್ತಲ್ಲಿ ಉತ್ತಾರಾಧಿಕಾರಿಗಳ ಧೀಕ್ಷಾ ಕಾರ್ಯಕ್ರಮ ನಡೆದುಹೋಗುತ್ತದೆ. ಭಕ್ತರ ಕೂಗು ಕೂಗಾಯೇ ಉಳಿಯಲಿದೆ.