SUDDILIVE || SHIVAMOGGA
ಹವಲ್ದಾರ್ ರಮೇಶ್ ಗೆ ಅದ್ದೂರಿ ಸ್ವಾಗತ-A grand welcome for Havildar Ramesh
ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಕರ್ತವ್ಯ ಮುಗಿಸಿ ಮೊದಲ ಬಾರಿಗೆ ಊರಿಗೆ ಆಗಮಿಸುತ್ತಿರುವ ಅವಲ್ದಾರ್ ರಮೇಶ್ ಗೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಮಾಡಲಾಯಿತು
ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಂಜಾಬ್ ನ ಅಮೃತಸರ ಗಡಿಯಲ್ಲಿ ಭಾಗವಹಿಸಿ ಇಂದು ಅವರ ಸ್ವಂತ ಊರಾದ ಶಿವಮೊಗ್ಗದ ಅಸೂಡಿ ಗ್ರಾಮದ ಅಮರಾವತಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಪ್ಕಾಮ್ಸ್ ಅಧ್ಯಕ್ಷರಾದ ವಿಜಯಕುಮಾರ್ ನೇತೃತ್ವದಲ್ಲಿ ಅವರ ಸಂಗಡಿಗರು ಗ್ರಾಮಸ್ಥರು ಎಲ್ಲರೂ ಸೇರಿ ಭರ್ಜರಿ ಸ್ವಾಗತ ಕೋರಿದರು. ಏರ್ ಡಿಫೆನ್ಸ್ ನಲ್ಲಿ ಕಾರ್ಯನಿರ್ವಹಿಸಿದ ಯೋಧ ಹವಲ್ದಾರ್ ರಮೇಶ್ ಇಂದು ತಮ್ಮ ಊರಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯೋಧ ರಮೇಶ್ 26 ಜನ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಅಪರೇಷನ್ ಸಿಂಧೂರದ ಮೂಲಕ ಉಗ್ರರ 9 ಅಡಗು ತಾಣವನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಆ ಕಾರ್ಯಾಚರಣೆಯ ಒಂದು ಭಾಗವಾಗಿ ನಾನು ಕೂಡ ಪಂಜಾಬ್ ಅಮೃತ್ ಸ್ವರದ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ಇಲ್ಲಿನ ಭವ್ಯ ಸ್ವಾಗತ ನನಗೆ ಇನ್ನಷ್ಟು ಉತ್ಸಾಹ ನೀಡಿದೆ ಮತ್ತು ಸಂತೋಷ ತಂದಿದೆ ಎಂದರು. ಯೋಧನ ಪತ್ನಿ ಸಿಂಧು ಮಾತನಾಡಿ ಹಿಂದೂ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ನಮ್ಮ ಯೋಧರು ತಕ್ಕ ಪಾಠ ಕಲಿಸಿದ್ದಾರೆ ನಾನೊಬ್ಬಳು ಯೋಧನ ಪತ್ನಿ ಎನ್ನುವುದಕ್ಕೆ ನನಗೆ ಅತ್ಯಂತ ಸಂತೋಷವಾಗಿದೆ. ಗ್ರಾಮಸ್ಥರ ಮತ್ತು ಸಾರ್ವಜನಿಕರ ಹಾಗೂ ನಾಯಕರ ಈ ಪ್ರೀತಿ ಕಂಡು ನನಗೆ ಹೆಮ್ಮೆ ಎನಿಸಿದೆ ಎಲ್ಲಾ ಯೋಧರಿಗೂ ಇದೇ ರೀತಿಯ ಸನ್ಮಾನ ಸ್ವಾಗತ ಸಿಗಲಿ ಎಂದು ಹಾರೈಸುತ್ತೇನೆ ಎಂದರು.
grand welcome for Havildar Ramesh