SUDDILIVE || SAGARA
ಪತ್ರಕರ್ತರಿಗೆ ಧಮ್ಕಿ ಹಾಕಿದವರ ವಿರುದ್ಧ ಹಾಗೂ ವಕೀಲರ ಮೇಲಿನ ಹಲ್ಲೆ ಖಂಡಿಸಿ ಸಾಗರದಲ್ಲಿ ವಕೀಲರ ಸಂಘದಿಂದ ಮನವಿ-Appeal from the Bar Association in Sagara against those who threatened journalists and condemning attacks on lawyers
ಪತ್ರಕರ್ತ ಮಹೇಶ್ ಹೆಗಡೆ, ರವೀಂದ್ರ ಕಾಮತ್ ಹಾಗೂ ಈತನ ಸಹಚರರೂ ಜೀವಬೆದರಿಕೆ ಸಹಿತ ಅವಾಚ್ಯ ಶಬ್ದಗಳನ್ನ ನಿಂದಿಸಿ, ವಿರೋಧಿಸಿದ ಆರೋಪಿತರ ವಿರುದ್ಧ ಹಾಗೂ ತೀರ್ಥಹಳ್ಳಿಯಲ್ಲಿ ವಕೀಲ ಮಧುಕರ ಮಯ್ಯರನ್ನ ಹಲ್ಲೆಗೊಳಿಸಿದವರನ್ನ ಬಂಧಿಸುವಂತೆ ಒತ್ತಾಯಿಸಿ ಒಂದು ಸಾಗರದಲ್ಲಿ ವಕೀಲರ ಸಂಘ ಪ್ರತಿಭಟಿಸಿದೆ.
ಪತ್ರಕರ್ತ ಮಹೇಶ್ ಹೆಗಡೆ, ರವೀಂದ್ರ ಕಾಮತ್ ರಿಗೆ ರಿಯಲ್ ಎಸ್ಟೇಟ್ ದಂಧೆಕೋರರು ಧಮ್ಕಿ ಹಾಕಿ ಜೀವ ಬೆದರಿಕೆ ಹಾಕಿರುವವರನ್ನ ಕೂಡಲೇ ಬಂಧಿಸುವಂತೆ ಸಂಘಟನೆ ಆಗ್ರಹಿಸಿದೆ.
ತೀರ್ಥಹಳ್ಳಿಯ ವಕೀಲ ಮಧುಕರ್ ಮಯ್ಯರ ಮೇಲೆ ಹಲ್ಲೆ ನಡೆಸಿದವರು ವೃತ್ತಿಯನ್ನಮಾಡದಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ನಿರಂತರವಾಗಿ ವೃತ್ತಿ ನಡೆಸುವವರಿಗೆ ಅಡ್ಡಿ ಆತಂಕ ಎದುರಾಗುತ್ತಿದೆ. ಇವರಿಂದ ವಕೀಲರನ್ನ ರಕ್ಷಿಸಿ ಹಲ್ಲೆ ನಡೆಸಿದವರನ್ನ ತಕ್ಷಣ ಬಂಧಿಸಬೇಕು ಮತ್ತು ತಕ್ಷಣ ಪ್ರಕರಣ ತನಿಖೆ ಮಾಡುವಂತೆ ಆಗ್ರಹಿಸಲಾಯಿತು.
ವಕೀಲರಾದ ಮಧುಕರ ಮಯ್ಯ ಮತ್ತು ಪತ್ರಕರ್ತರ ಮೇಲಿನ ಪ್ರಕರಣವನ್ನ ಸಾಗರ ಉಪ ವಿಭಾಗೀಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕೆಂದು ಆಗ್ರಹಿಸಿದರು.
Appeal from the Bar Association in Sagara