SHIVAMOGGA || SHIVAMOGGA
ಐ ಡೋಂಟ್ ಕೇರ್ ಎಂದಿದ್ದೇಕೆ ಚಕ್ರವರ್ತಿ ಸೂಲೊಬೆಲೆ?Why did Chakrvarthi soolibele say I don't care?
ಸ್ವಾಭಿಮಾನ ಭಾರತ ಜಾಗೃತಿಯಾಗಿ ನಿನ್ನೆಗೆ 11 ವರ್ಷ ಕಳೆದಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಅವರು ವಿನೋಬನಗರದಲ್ಲಿರುವ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಈಶ್ವರಪ್ಪನವರ 77 ನೇ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಆಪರೇಷನ್ ಸಿಂದೂರದ ದಿಕ್ಸೂಚಿ ಭಾಷಣದ ಮಾತನಾಡಿದರು.
11 ವರ್ಷದಲ್ಲಿ ದೇಶದ ಅಂತರ್ ಶಕ್ತಿಯ ಪುನರ್ ಜಾಗೃತಿ ಅದ್ಬುತವಾಗಿದೆ. ಪಾಕ್-ಭಾರತ, ಪ್ರಥಮ, ದ್ವಿತೀಯ ವಿಶ್ವಯುದ್ಧದಲ್ಲಿ ಕುತ್ತಿಗೆ ಕೊಯ್ಯುದು ಅಮೇರಿಕದ ಸ್ವಭಾವ, ಭಾರತದ ಸ್ವಭಾವ ಹಾಗಲ್ಲ. ಎಲ್ಲರ ಜೊತೆಗೆ ಸಾಗುವುದು ಭಾರತದ ಗುಣವಾಗಿದೆ ಎಂದರು.
ಚಾಣುಕ್ಯನ ಕಾಲದಲ್ಲಿ ಚಂದ್ರಗುಪ್ತ ಮೌರ್ಯನ ಜೊತೆ ಅದ್ಬುತ ಭಾರತ ಕಟ್ಟಿದ್ದ. ನಂತರ ಬಂದ ಅಶೋಕ ಬುದ್ಧ ನನ್ನ ತಪ್ಪಾಗಿ ಅರ್ಥೈಸಿಕೊಂಡು ಸಮರ್ಥ ಆಡಳಿತ ಕೊಡುವಲ್ಲಿ ವಿಫಲವಾಗಿತ್ತು. ನಂತರ ಭವ್ಯ ಭಾರತ ಬೆಳಗಿದ್ದು ಗುಪ್ತರಕಾಲದಲ್ಲಿ. ಇವರಾದ ನಂತರ ಬಂದ ಮೊಘಲರಿಂದ ಆಳಲ್ಪಟ್ಟಿತು. ಇದಾದ ನಂತರ ಹಿಂದುತ್ವದ ವೈಭವಕಂಡಿದ್ದು ಶಿವಾಜಿ ಮತ್ತು ವಿಜಯ ನಗರ ಸಾಮ್ರಾಜ್ಯದಲ್ಲಿ ಎಂದರು.
ನನ್ನ ವಿರುದ್ಧ ಕಾಂಗ್ರೆಸ್ ಗೆ ಆಗೊಲ್ಲ. ಇಂದು ಪೊಲೀಸ್ ಇಲಾಖೆ ನನ್ನ ವಿರುದ್ಧ ಒಂದಿಷ್ಟು ಪ್ರಕರಣ ಹುಡುಕಿತು. ಅಂತಹದ್ದು ಆಗಿದ್ದರೆ ಪ್ರೀತಿಯಿಂದ ಸ್ವೀಕರಿಸುತ್ತಿದ್ದೆ. ಕಾರಣ ಒಂದಿಷ್ಟು ಪುಸ್ತಕ ಓದುವುದಿದೆ. ಅದನ್ನ ಜೈಲಿನಲ್ಲಿ ಮಾಡುತ್ತಿದ್ದೆ. ನಿಮ್ಮ ಬೊಡ್ಡುಬೆದರಿಕೆಗೆ ಬಗ್ಗೊಲ್ಲ ಐ ಡೋಂಟ್ ಕೇರ್ ಎಂದರು.
1962 ರ ಚೈನದ ಜೊತೆ ನಡೆದ ಯುದ್ಧಕ್ಕೆ ಭಾರತ ಸಿದ್ದವಾಗಿರಲಿಲ್ಲ. ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿ ಆಗಿದ್ದಾಗ ನಡೆದ ಯುದ್ಧ ನಂತರ 1971 ರಲ್ಲಿ ನಡೆದ ಯುದ್ಧದಲ್ಲಿ ಲಾಹೋರವರೆಗೆ ಹೋಗಿ ನುಗ್ಗಿ ಹೊಡೆದರು. ಪಿಒಕೆ ಗೆಲ್ಲಲಿಲ್ಲ. ನಾವು 93 ಸಾವಿರ ಪಾಕ್ ಸೇನಿಕರನ್ನ ಬಿಡಲಾಯಿತು. ನಮ್ಮ 53 ಸೈನಿಕರ ಕಥೆ ಏನಾಯಿತು ಗೊತ್ತೇ ಆಗಲಿಲ್ಲ ಎಂದರು.
ನಂತರ ಕಾರ್ಗಿಲ್ ಯುದ್ಧ ನಡೆದರೆ 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಯಿತು ಪುಲ್ವಾಮಾ ದಾಳಿ ನಡೆಯಿತು. ಏರ್ ಸ್ಟ್ರೈಕ್ ನಡೆಸಲಾಯಿತು. ಆಗ ಪಾಕ್ ಭಾರತದ ತಂಟೆಗೆ ಬರಲಿಲ್ಲ. ಆಗ ಪಾಕ್ ಗೆ ಹಣ ಹರಿವು ಹರಿದುಬರಲಿಲ್ಲ. ಜಮ್ಮು ಕಾಶ್ಮೀರಲ್ಲಿ ಚಿತ್ರಣ ಬದಲಾಯಿತು. ಹೀಗಾಗಿ ಪಾಕ್ ಗೆ ಬೆಂಬಲಿಸಿದರೆ ಪ್ರಯೋಜನವಾಗಲಿಲ್ಲ ಎಂದು ಚೀನ ಮತ್ತು ಅಮೇರಿಕಾಕ್ಕೆ ಅನಿಸಿತು. ಹಾಗಾಗಿ ಇವರ ಸಹಾಯ ಕಡಿಮೆಯಾಯಿತು.
ಪಾಕ್ ಸೈನಿಕನ ಮುಖ್ಯಸ್ಥ ಹಿಂದೂ ಮುಸ್ಲೀಂ ಒಂದಾಗೊಲ್ಲ ಎಂದು ಭಾಷಣ ಮಾಡ್ತಾನೆ. ಇದು ಆ ದೇಶದ ದುರಂತವಾಗಿತ್ತು. ಪೆಹಲ್ಗಾಮ್ ನಲ್ಲಿ ಧರ್ಮ ಕೇಳಿ ಹತ್ಯೆ ಮಾಡಲಾಯಿತು. ಆಪರೇಷನ್ ಸಿಂದೂರ್ ಗೆ ಕಾರಣ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಕಾರಣವಾಗಿದ್ದರು ಎಂದರು.
ಮೆಏ 7 ರ ಬೆಳಗ್ಗಿನ ಜಾವ ಪಾಕ್ ನ 9 ಜಾಗವನ್ನ ಸ್ಕಾಲ್ಫ್ ಬಾಂಬ್ ದಾಳಿಯನ್ನ ಭಾರತ ನಡೆಸಿತ್ತು. ಭಾವಲ್ಪುರ 120 ಕಿಮಿ ದೂರದಲ್ಲಿದ್ದ ಜಾಗದ ಮೌಲಾನ ಮಸೂರ್ ಅಸದ ಮಸೀದಿಯನ್ನ ಧ್ವಂಸ ಮಾಡಲಾಗಿತ್ತು. ಅಟಲ್ ಪ್ರಧಾನಿಯಾಗಿದ್ದಾಗ ಮೌಲಾಬಾ ಮಸೂದ್ ಅಜರ್ ವಿಮಾನವನ್ನ ಹೈಜಾಕ್ ಮಾಡಿದ್ದ ಆತನ ಸಹೋದರನನಗನ ಹೊಡೆದು ಹಾಕಲಾಯಿತು. ಪಾಕ್ ಒಂದು ಯುದ್ಧ ವಿಮಾನ ಹೊಡೆದಿದೆ ಎಂದು ಹೇಳ್ತಯಿದೆ. ಡ್ರೋಣ್ ತರಹ ರಫೇಲ್ ಎಲೆಕ್ಟ್ರಾನಿಕ್ ಸುಗ್ನಲ್ ಚಿಮ್ಮಿಸಿತಾ ಹೋಯಿತು.
ಪೈಲೆಟ್ ಹೊಡೆದಿದ್ದ ಸೀಡ್ ವಿಮಾನ ಗಳನ್ನ ಹೊಡೆದ ಪಾಕ್ ರಫೇಲ್ ಹೊಡೆದ್ವಿ ಎಂದಿತು. ಅದರಲ್ಲಿ ಪೈಲೆಟ್ ಇಲ್ಲದ ಯುದ್ಧ ವಿಮಾನವನ್ನ ಪಾಕ್ ಹೊಡೆದಿದೆ ಎಂದು ಅದಕ್ಕೆ ತಿಳಿದೆ ಇಲ್ಲ. ಪಾಕ್ ನ ಏರ್ ಸಿಸ್ಟಮ್ ಧ್ವಂಸ ಮಾಡಲಾಗಿತ್ತು. ಹೆಚ್ ಕ್ಯೂ 9 ಸೈಲೆಂಟ್ ಮಲಗಿತ್ತು. ನಂತರ ಬಳಸಿದ್ದೆ ಬ್ರಹ್ಮೋಸ್ ನ್ನ ೧೨ ಏರ್ ಬೇಸ್ ನ್ನ ಉಡಾಯಿಸಿತ್ತು. ಒಟ್ಟು 19ಏರ್ ಬೇಸ್ ಧ್ವಂಸವಾಗಿತ್ತು. ಈ ತರ ಪಾಕ್ ನ್ನ ಡೆಸ್ಟ್ರೋಯ್ಡ್ ಮಾಡಿತು. ನೂರ್ ಖಾನ್ ಏರ್ ಬೇಸ್ ನ್ನ ಅಮೇರಿಕದ ನಿಯಂತ್ರದಲ್ಲಿತ್ತು. ಏರ್ ಕ್ರಾಪ್ಟ್ ಧ್ವಂಸವಾಗಿತ್ತು. ಸರ್ಗೋದಾ ಕೈರಾಣ ನೂಕ್ಲೀಯರ್ ಕೇಂದ್ರದ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಸುರಂಗ ಮಾರ್ಗ ಧ್ವಂಸವಾಗಿದೆ. ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ ಎಂದರು.
ಸರ್ಗೋದ ಪ್ರತಿದಿನ ಭೂಕಂಪ ಆಗ್ತಾನೆ ಇದೆ. ಪ್ರಧಾನಿ ನೂಕ್ಲೀಯರ್ ಇದೆ ಅಂತ ಬೆದರಿಸಬೇಡಿ ಎಂದಿದ್ದಾರೆ. ಅಂದರೆ ನೂಕ್ಲಿಯರ್ ಬಳಕೆಗೆ ಪಾಕ್ ಸಾಧ್ಯವಾಗದಂತ ಸ್ಥಿತಿ ಇಲಗಲವಾಗಿದೆ. ಪಾಕ್ ಏರ್ ಬೇಸ್ ರಿಪೇರಿ ಮಾಡಿಕೊಳ್ಳಲು ಎರಡು ವರ್ಷ ಬೇಕು. ಹಾಗಾಗಿ ಆಪರೇಷನ್ ಸಿಂದೂರ ಮುಗಿದಿಲ್ಲ. ಇಷ್ಟುದಿನ ಹುತಾತ್ಮ ಯೋಧನನ್ನ ಸನ್ಮಾನಿಸುತ್ತಿದ್ದೆವು. ಇಂದು ನಾವು ಜೀವಂತ ಯೋಧನನ್ನ ಸನ್ಮಾನಿಸಿದ್ದೇವೆ ಎಂದರು.
ಎಲ್ಲ ಸರಿಯಿದ್ದ ವೇಳೆ ಟ್ರಂಪ್ ಮಧ್ಯ ಬಾಯಿ ಹಾಕಿದರು. ಭಾರತ ಬ್ರಹ್ಮೋಸ್ ಬ್ಯಾಚ್ 3 ಯನ್ನ ಬಳಸಿತ್ತು. ಬ್ಯಾಚ್ 4 ಮತ್ತು 5 ಬಳಕೆ ಮಾಡಿದ್ದರೆ ಪಾಕ್ ಬಳಿ ತಡೆಯಲು ಯಾವ ಸಾಧನ ಇರಲಿಲ್ಲ. ಹಾಗಾಗಿ ಅಮೇರಿಕಾದ ಮಧ್ಯೆ ಇಟ್ಟುಕೊಂಡು ಸೀಜ್ ಫೈರ್ ಮಾಡಿತು ಎಂದರು.
ಎಲಾನ್ ಮಸ್ಕ್ ಜೊತೆ ಜಗಳ ನಿಲ್ಲಿಸಿಕೊಳ್ಳದ ಟ್ರಂಫ್ ಇಂದು ಭಾರತಕ್ಕೆ ಯುದ್ಧ ನಿಲ್ಸುವ ಶಕ್ತಿ ಇದೆಯಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವಿರುದ್ಧ ಹೌಹಾರಿದ ಸೂಲಿಬೆಲೆ ಬಾಂಬ್ ಹಾಕಿದಾಗ ಶಾಂತಿ ಮಂತ್ರ ಜಪಿಸಿತ್ತು. ಅರ್ಧಗಂಟೆಯಲ್ಲಿ ಕಾಂಗ್ರೆಸ್ ಹಿಂಪಡೆಯಿತು. ಈ ಬಾರಿ ಫ್ರೂಫ್ ಕೇಳಲಿಲ್ಲ. ಯುದ್ಧ ವಿರಾಮ ಘೋಷಿಸಿದರೆ ಕಾಂಗ್ರೆಸ್ ನರೇಂದ್ರ ಮೋದಿ ಅಲ್ಲ ಸರೆಂಡರ್ ಮೋದಿ ಎಂದು ದೂರಿತು. ಇವರ ಮೀಮ್ ನ್ನ ಪಾಕ್ ಟ್ರೋಲ್ ಮಾಡಿತ್ತು. ಇದನ್ನೇ ಪಾಕ್ ಮಂತ್ರಿಯೊಬ್ಬ ಪಾಕ್ ಯುದ್ಧ ಗೆದ್ವೋ ಇಲ್ವೋ ಗೊತ್ತಿಲ್ಲ ಆದರೆ ಮೀಮ್ಸ್ ನಲ್ಲಿ ಗೆದ್ವಿ ಎಂದಿದ್ದ. ಇದು ಅಕ್ ನ ಯುದ್ಧವಾಗಿದೆ ಎಂದು ವ್ಯಂಗ್ಯವೆನಿಸಿತು.
ಪಾಕಿಸ್ತಾನಕ್ಕೆ ಓವೈಸಿ ಬೆಂಕಿ ಹಚ್ಚಿ ಬಂದಿದ್ದಾರೆ. ಕನ್ನಿಮೋಳಿ ಭಾರತವನ್ನ ಹೊಗಳಿ ಬಂದಿದ್ದಾರೆ. ಇವರ ವಿರುದ್ಧ ನಮ್ಮ ವೈಚಾರಿಕತೆಯಲ್ಲಿ ವಿರೋಧವಿದೆ. ಆದರೆ ಭಾರತವನ್ನ ಹೊಗಳಿ ಬಂದಿದ್ದಾರೆ. ಆಪರೇಷನ್ ಸಿಂದೂರ್ ಪಾಸ್ ಮಾಡಿದೆ. ನಿಲ್ಸಿಲ್ಲ. ಐದು ಜೆಎಫ್ 16 ನ್ನ ಹೊಡೆದು ಉರುಳಿಸಿದೆ ಎಂದರು.
ಮೌರ್ಯರ ಕಾಲದ ವಿಜೃಂಭಣೆ, ಮರಾಠ ಕಾಲದ ವೈಭವ ಮೋದಿಕಾಲದಲ್ಲಿ ಮರುಕಳಿಸಿದೆ ಎಂದು ತಿಳಿಸಿದರು.
Chakrvarthi soolibele say I don't care?