ವಿಶ್ರಾಂತಿ ಪಡೆದಿದ್ದ ನಕಲಿ ಚಿನ್ನಾಭರಣದ ವಂಚನೆ ಪ್ರಕರಣ ಮುಂದುವರಿಕೆ-Fake gold jewelry fraud case continues

SUDDILIVE || SHIVAMOGGA

ವಿಶ್ರಾಂತಿ ಪಡೆದಿದ್ದ ನಕಲಿ ಚಿನ್ನಾಭರಣದ ವಂಚನೆ ಪ್ರಕರಣ ಮುಂದುವರಿಕೆ-Fake gold jewelry fraud case continues after resting

Fake gold, continues



ಬಂಗಾರದ ನಾಣ್ಯ ಎಂದು ನಂಬಿಸಿ 11 ಲಕ್ಷ ರೂಪಾಯಿ ವಂಚಿಸಿರುವ ಘಟನೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

ಬೆಂಗಳೂರಿನ ನಿವಾಸಿ ಗೌತಮ್ ಭಂಡಾರಿ ಎಸ್ ಎಂಬುವರಿಗೆ ಟ್ಯಾಕ್ಸಿಯಲ್ಲಿ ಹೋಗುವಾಗ ಶಿವಮೊಗ್ಗದ ಪ್ರದೀಪ್ ಎಂಬಾತ ಪರಿಚಯವಾಗಿದ್ದನು. ಬೆಂಗಳೂರಿನಲ್ಲಿ ಕಂಟ್ರ್ಯಾಕ್ಟರ್ ಆಗಿದ್ದ ಗೌತಮ್ ಗೆ ಪ್ರದೀಪ್ ಶಿವಮೊಗ್ಗಕ್ಕೆ ಬಂದರೆ ನನಗೆ ಫೋನ್ ಮಾಡಿ ಸರ್ ನಿಮಗೆ ಒಳ್ಳೆ ಟೂರಿಸ್ಟ್ ಪ್ಲೇಸ್ ಗಳನ್ನು ತೋರಿಸುವೆ ಎಂದು ನಂಬಿಸಿದ್ದನು. ಈ ವೇಳೆ ಇಬ್ಬರು ತಮ್ಮ ಮೊಬೈಲ್ ನಂಬರ್ ಗಳನ್ನು ಹಂಚಿಕೊಂಡಿದ್ದರು.

ಗೌತಮ್ ತನ್ನ ಪರಿಚಯವಿದ್ದ ನಾಗೇಶ್ ಮತ್ತು ಚಿಕ್ಕ ಸ್ವಾಮಿಯವರೊಂದಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಶಿವಮೊಗ್ಗದಿಂದ ಸಿಗಂದೂರು ದೇವಸ್ಥಾನಕ್ಕೆ ಹೋಗಿದ್ದರು. ಸಿಗಂದೂರಿನಲ್ಲಿದ್ದಾಗ ಪ್ರದೀಪ್ ಗೆ ಫೋನ್ ಮಾಡಿದ ಗೌತಮ್ ಶಿವಮೊಗ್ಗಕ್ಕೆ ಬಂದಿದ್ದೇವೆ ಟೂರಿಸ್ಟ್ ಪ್ಲೇಸ್ ತೋರಿಸ್ತೀನಿ ಅಂತ ಹೇಳಿದ್ದೀಯಾ ತೋರಿಸು ಎಂದು ಕೇಳಿದ್ದರು. ಶಿವಮೊಗ್ಗದ ಶ್ರೀರಾಂಪುರ ಕ್ಕೆ ಬಂದು ನನಗೆ ಕರೆ ಮಾಡಿ ನಾನು ಅಲ್ಲೇ ಇರುವುದು ಎಂದು ಪ್ರದೀಪ್ ಸಹ ಹೇಳಿದ್ದನು.

ಶ್ರೀರಾಂಪುರಕ್ಕೆ ಬಂದು ಗೌತಮ್ ಪ್ರದೀಪ್ ಗೆ ಫೋನ್ ಮಾಡಿದಾಗ ಪ್ರದೀಪ್ ಬಂದು ಭೇಟಿಯಾಗಿದ್ದರು ತಮ್ಮ ಬಳಿ ಮಾತನಾಡುವುದು ಇದೆ ಎಂದು ಪ್ರದೀಪ್ ಹೇಳಿದ್ದು ಶ್ರೀರಾಂಪುರದ ಖಾಲಿ ಮೈದಾನಕ್ಕೆ ಗೌತಮ್ ರನ್ನು ಕರೆದುಕೊಂಡು ಹೋಗಿ ತನ್ನ ಜೊತೆ ಬಂದಿದ್ದ ವಸಂತ್, ಕೊಳ್ಳಿ ರಘು, ಮುದ್ದಪ್ಪರನ್ನು ಪರಿಚಯಿಸಿ ಮುದ್ದಪ್ಪರ ತಂಗಿ ಗೆ ಮದುವೆ ಇದೆ ಹಣದ ಅವಶ್ಯಕತೆ ಇದೆ ಅವರ ಬಳಿ ಹಳೇ ಕಾಲದ ನಾಣ್ಯವಿದೆ ಇದನ್ನು ತೆಗೆದುಕೊಂಡು ನಮಗೆ ಹಣ ನೀಡಿ ಎಂದು ಹೇಳಿದ್ದನ್ನು.

250 ಗ್ರಾಂ ಬಂಗಾರದ ನಾಣ್ಯಗಳಿವೆ 11,00,000 ರೂ.ಗೆ ಕೊಡುವುದಾಗಿ ಕೇಳಿದ್ದ ಪ್ರದೀಪ್, ತಾವು ಮೊದಲು ಎರಡು ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹೋಗಿ ಪರಿಶೀಲಿಸಿ ನಂತರ ಉಳಿದ ಬಂಗಾರವನ್ನು ಹಣ ಕೊಟ್ಟು ತೆಗೆದುಕೊಂಡು ಹೋಗುವಂತೆ  ಮನವಿ ಮಾಡಿಕೊಂಡಿದ್ದನು. 

ಅದರಂತೆ ಗೌತಮ್ ಅಸಲಿ ಎರಡು ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲಿ ತಮಗೆ ಪರಿಚಯ ಇರುವ ಅಕ್ಕಸಾಲಿಗೆ ತೋರಿಸಿ ಪರಿಶೀಲಿಸಿದ್ದರು. ಪರಿಶೀಲನೆಯಲ್ಲಿ ಚಿನ್ನದ ನಾಣ್ಯ ಅಸಲಿ ಎಂದು ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಗೌತಮ್ ಸ್ನೇಹಿತರಾದ ನಾಗೇಶ್, ಚಿಕ್ಕ ಸ್ವಾಮಿ, ವರುಣೇಶ್ ಹಾಗೂ ಮದನ್ ಅವರಿಂದ ಹಣವನ್ನು ಸಾಲವಾಗಿ ಪಡೆದುಕೊಂಡು ಪ್ರದೀಪ್ ಗೆ ಒಪ್ಪಿಸಿ 250 ಗ್ರಾಂ ನಕಲಿ ಬಂಗಾರ ನಾಣ್ಯಗಳನ್ನು ತೆಗೆದುಕೊಂಡು ಹೋಗಿದ್ದರು.

ಇವುಗಳನ್ನೆಲ್ಲ ಪರಿಶೀಲಿಸಿದಾಗ ಇವು ನಕಲಿ ಚಿನ್ನದ ನಾಣ್ಯಗಳು ಎಂದು ತಿಳಿದು ಬಂದಿವೆ ಈ ನೆಲೆಯಲ್ಲಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಬಂದು ಗೌತಮ್ ದೂರು ದಾಖಲಿಸಿದ್ದಾರೆ. ಇದರಿಂದ ಮಧ್ಯ ವಿಶ್ರಾಂತಿ ಪಡೆದಿದ್ದ ನಕಲಿ ಬಂಗಾರದ ವಂಚನೆ ಪ್ರಕರಣ ಶಿವಮೊಗ್ಗದಲ್ಲಿ ಮುಂದುವರೆದಿದೆ.

Fake gold jewelry fraud case continues

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close