" alt="ad">

ಬೆಳಗ್ಗಿನ ಜಾವ ಧಾರಾಶಾಹಿಯಾದ ಬೃಹತ್ ಗಾತ್ರದ ಮರ-ಕುಟುಂಬ ಪ್ರಾಣಾಪಾಯದಿಂದ ಪಾರು-Family escapes from death after huge tree falls in early morning

SUDDILIVE || SHIVAMOGGA

ಬೆಳಗ್ಗಿನ ಜಾವ ಧಾರಾಶಾಹಿಯಾದ ಬೃಹತ್ ಗಾತ್ರದ ಮರ-ಕುಟುಂಬ ಪ್ರಾಣಾಪಾಯದಿಂದ ಪಾರು-Family escapes from death after huge tree falls in early morning

Tree, fall

ರಾತ್ರಿ ಬಿದ್ದ ಮಳೆಗೆ ಮರವೊಂದು ಧಾರಾಶಾಹಿಯಾಗಿದ್ದು ಮನೆ ಹಾನಿಗೊಳಗಾಗಿದೆ. ಮನೆಯವರೆಲ್ಲ ಮಲಗಿದ್ದ ವೇಳೆ ಹೆಬ್ಬಹಲಸಿನ ಮರ ಮುರಿದುಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. 

ತೀರ್ಥಳ್ಳಿ ತಾಲೂಕು ಹೊನ್ನೇ ತಾಳು ಗ್ರಾಮ ಪಂಚಾಯತ್ ನ ಚಂಗಾರು ಗ್ರಾಮ ಹೊಸಪೇಟೆ ನೇತ್ರಾವತಿ ಬಾಬು ಪೂಜಾರಿ ಎನ್ನುವರ ಮನೆ ಹಾಗೂ ಅಡಿಕೆ ಮರಗಳು ತೀವ್ರವಾಗಿ ಹಾನಿಯಾಗಿದೆ. ಮನೆಯ ಹಂಚು ಪೀಸ್ ಪೀಸ್ ಆಗಿದೆ. ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನೆಯ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. 

ಬೆಳಗಿನ ಜಾವ 3:00 ಹೊತ್ತಿಗೆ ಮನೆಯಲ್ಲಿ ಎಲ್ಲರೂ ಮಲಗಿದ ಹೊತ್ತಿನಲ್ಲಿ ಮರವು ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಹಲವು ವಸ್ತುಗಳು ಹಾನಿಯಾಗಿವೆ. 20ಕ್ಕೂ ಹೆಚ್ಚು ಅಡಿಕೆ ಮರ ಹಾನಿಯಾದರೆ ಮನೆ ಸೇರಿದಂತೆ ಐದು ಲಕ್ಷಕ್ಕೂ ಹೆಚ್ಚು ಹಾನಿಗೊಳಗಾಗಿದೆ ಎಂದು ಸಂತ್ರಸ್ತ ಪೂಜಾರ್ ಸುದ್ದಿಲೈವ್ ಗೆ ತಿಳಿಸಿದ್ದಾರೆ. 

ಘಟನಾಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯ್ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಾದ ಚಂಗಾರು ಗ್ರಾಮ ಗ್ರಾಮದ ಪಂಚಾಯತ್ ಸದಸ್ಯರಾದ ರವೀಶ್ ಹೊಸಪೇಟೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹಾಗೂ ಹಾನಿಯನ್ನ ಪರಿಶೀಲಿಸಿದ್ದಾರೆ. 

ಆಗುಂಬೆ ಭಾಗದಲ್ಲಿ ಧಾರಾಕಾರ ಮಳೆಗೆ ಹಲವು ರಸ್ತೆಗಳಿಗೆ ಬೃಹದ್ದಾಕರದ ಮರಗಳ ಬಿದ್ದು ರಸ್ತೆ ಸಂಪರ್ಕ ಕಳೆದುಕೊಂಡಿದೆ ಹಾಗೆಯೇ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದು ಪ್ರಾಣಾಪಯದಿಂದ ಕುಟುಂಬ ಪಾರಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close