SUDDILIVE || THIRTHAHALLI
ತೀರ್ಥಹಳ್ಳಿ ತಾಲೂಕು ಹೊನ್ನೇತಾಳು ಶಾಲೆಗೆ ನಾಳೆ ರಜೆ ಘೋಷಣೆ-Holiday declared for Honnethalu School in Thirthahalli Taluk tomorrow
ಶಿವಮೊಗ್ಗ ಜಿಲ್ಲೆ ತೀರ್ಥಳ್ಳಿ ತಾಲೂಕಿನ ಹೊನ್ನೇ ತಾಳು ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಆಗುಂಬೆ ಭಾಗದಲ್ಲಿ ಅತಿಯಾದ ಗಾಳಿ ಮಳೆಯ ಕಾರಣ ಹಾಗೂ ಹಳ್ಳಕೊಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ನಿತ್ಯಾನಂದ ಈ ಕ್ರಮ ಜರುಗಿಸಿದ್ದಾರೆ.
ಶಾಲೆಗೆ ಬರುವ ಮಕ್ಕಳ ಗ್ರಾಮಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಾಗೂ ಕೆಲವು ಜಾಗಗಳಲ್ಲಿ ಅಪಾಯದ ಸ್ಥಿತಿ ಇದ್ದು ಹಾಗೂ ಶಾಲೆಗೆ ಬರುವ ವಾಹನಗಳು ನಾಬಳ ನದಿ ದಂಡೆಯ ಮೇಲ್ಭಾಗದಲ್ಲಿ ಬರುವುದರಿಂದ ನಾಬಳ ನದಿ ಸಂಪರ್ಕ ಕಡಿತಗೊಂಡ ಕಾರಣ SDMC ಅವರ ಮೌಖಿಕ ಆದೇಶ ಮೇರೆಗೆ ನಾಳೆ ಜೂ.27 ರಂದು ಶುಕ್ರವಾರ ಶಾಲೆಗೆ ಸ್ಥಳೀಯವಾಗಿ ರಜೆ ಘೋಷಣೆ ಮಾಡಲಾಗಿದೆ
ಈ ರಜೆ ಕೊಟ್ಟ ದಿನಗಳನ್ನು ಮುಂದಿನ ದಿನಗಳಲ್ಲಿ ಶನಿವಾರ ಪೂರ್ಣ ಶಾಲೆಯನ್ನು ನಡೆಸಿ ರಜಾ ದಿನಗಳನ್ನು ಸರಿದೂಗಿಸಲಾಗುವುದಾಗಿ ನಿತ್ಯಾನಂದ ಸುದ್ದಿಲೈವ್ ಗೆ ತಿಳಿಸಿದ್ದಾರೆ.
SDMC ಮನವಿ
1)ಯಾವುದೇ ಕಾರಣಕ್ಕೂ ಮಕ್ಕಳನ್ನು ಮನೆಯ ಹೊರಭಾಗದಲ್ಲಿ ಹಳ್ಳಕೊಳ್ಳ ನದಿಯ ದಂಡೆಯಲ್ಲಿ ಮಕ್ಕಳನ್ನು ಆಟವಾಡಲು ಕಳಿಸಬಾರದು
2) ಮಕ್ಕಳನ್ನು ಮನೆಯಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಇರಲು ಹೇಳಬೇಕು ಬೆಚ್ಚಗಿನ ಆಹಾರವನ್ನು ನೀಡಬೇಕು
3) ಶಾಲೆಗೆ ಬರುವ ಮುನ್ನ ಶಿಕ್ಷಕರಿಗೆ ಫೋನಿನ ಮುಖಾಂತರ ಸಂಪರ್ಕಿಸಿ ಹಾಗೂ ವಾಹನದ ಚಾಲಕರಿಗೆ ಸಂಪರ್ಕಿಸಿ ಶಾಲೆಗೆ ಹೊರಡಿಸಬೇಕು
4)ಆಯಾಯ ತರಗತಿಯ ಶಿಕ್ಷಕರಿಗೆ ಫೋನಿನ ಮುಖಾಂತರ ಸಂಪರ್ಕಿಸಿ ಹೋಂವರ್ಕ್ ಹಾಗೂ ಪಠ್ಯೇತರ ಚಟುವಟಿಕೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಎಸ್ ಡಿ ಎಂಸಿ ಕೋರಿದೆ.
Holiday declared for Honnethalu School