SUDDILIVE || SHIVAMOGGA
ಕೌಟುಂಬಿಕ ವಿಷಯದ ಬಗ್ಗೆ ಶಾಸಕ ಆರಗ ಕಳವಳ-MLA concerned about family matters
ಕೌಟುಂಬಿಕ ಸಮಸ್ಯೆಯ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿವಾಹ ವಿಚ್ಛೇಧನ ಮತ್ತು ರೈತರ ಮದುವೆಯಾಗದಿರುವುದರ ಬಗ್ಗೆ ಶಾಸಕರು ವಿಷಾದ ವ್ಯಕ್ತಪಡಿಸಿದರು.
ಅವರು ಆದಿಚುಂಚನಗಿರಿಯ ಸಭಾಭವನದಲ್ಲಿ ಒಕ್ಕಲಿಗರ ಮಹಿಳಾ ವೇದಿಕೆಯಿಂದ ಸಸ್ಯಹಾರಿ ಖಾದ್ಯಗಳ ಮತ್ತು ರಸ ಪ್ರಶ್ನೆ ಸ್ಪರ್ಧೆಯನ್ನ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಪೆಹಲ್ಗಾಮ್ ನಲ್ಲಿ ಧರ್ಮವನ್ನ ಕೇಳಿ ಹತ್ಯೆ ಮಾಡಲಾಯಿತು. ನಮ್ಮ ಊರಿನ ಮಹಿಳೆಯೊಬ್ಬರು ನಮ್ಮನ್ನೂ ಕೊಲೆ ಮಾಡು ಎಂದು ಬೇಡಿಕೊಂಡರೂ ಮೋದಿಗೆ ಹೇಳು ಎಂದು ಹೇಳಿ ಉಗ್ಗ ಹೋಗಿದ್ದ. 26 ಜನರ ಸಿಂದೂರ ಅಳಿಸಲಾಯಿತು. ಸಿಂದೂರದ ಬೆಲೆ ಏನು ಎಂದು ಜಗತ್ತು ನೋಡಿದೆ ಎಂದರು.
ಹೆಣ್ಣು ಕೇವಲ ಮಕ್ಕಳನ್ನ ಹೇರುವ ಮತ್ತು ಅಡಿಗೆ ಮಾಡುವ ಮಿಷಿನ್ ಅಲ್ಲ ಎಂಬ ಮೌಲ್ಯ ನಮ್ಮ ದೇಶದಲ್ಲಿದೆ. 100 ಕ್ಕೆ 50 ಭಾಗದ ಹೆಣ್ಣು ಮಕ್ಕಳು ಸ್ತ್ರೀ ಶಕ್ತಿಯಾಗಬೇಕಿದೆ. ಯುದ್ಧದ ಸಂಧರ್ಭದಲ್ಲಿ ಯೋನಿಕಾ ಸಿಂಗ್ ಮತ್ತು ಸೋಫಿಯಾ ಕುರೇಶಿ ಎಂಬ ಇಬ್ಬರು ಯೋಧ ಮಹಿಳೆಯರು ದಿನ ನಿತ್ಯದ ಆಪರೇಷನ್ ಸಿಂದೂರಿನಬಗ್ಗೆ ವಿವರಣೆ ನೀಡಿದ್ದಾರೆ. ಐಪಿಎಸ್ ನಿಂದ ಕಾನ್ ಸ್ಟೇಬಲ್ ವರೆಗೆ ಮಹಿಳೆಯರು ರಾಜ್ಯದಲ್ಲಿ 20% ನೇಮಿಸಬೇಕೆಂಬ ಗುರಿಯಿದೆ ಈಗ 13% ಪೊಲೀಸ್ ಇಲಾಖೆಯಲ್ಲಿ ಇದ್ದಾರೆ ಎಂದರು.
ಹೆಣ್ಣು ಎಲ್ಲಾ ರಂಗದಲ್ಲಿದ್ದಾರೆ. ಶಿಕ್ಷಣ ಪಡೆದ ಮಹಿಳೆ ಬಹಳ ಜನ ಹೊರಗೆ ಬಂದಿದ್ದಾರೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನ ತಿಳಿಸಲು ಒಬ್ಬ ಮಹಿಳೆಗೆ ಸಾಧ್ಯ. ಮಾನವ ಸಂಪನ್ಮೂಲವನ್ನ ಕೊಡುಗೆಯಾಗಿ ಕೊಡುವರು ಮಹಿಳೆಯರೆ. ಭಾರತ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ದೇಶದ ಆರ್ಥಿಕ ಸಚಿವಯೂ ಮಹಿಳೆಯಾಗಿದ್ದಾರೆ. ನಮ್ಮ ಹೆಣ್ಣುಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕು. ಸಿನಿಮಾ ನಟಿಯರು ರೋಲ್ ಮಾಡೆಲ್ ಗಳಲ್ಲ.
ಒನಕೆ ಓಬವ್ವ, ಝಾನ್ಸಿ ನಮ್ಮ ರೋಲ್ ಮಾಡೆಲ್ ಗಳಾಗಬೇಕು. ನಮ್ಮ ಭಾರತದಲ್ಲಿ ಮದುವೆಗಳು ಯಶಸ್ವಿಯಾಗುತ್ತಿಲ್ಲ. ಮದುವೆ ಊಟ ಮುಗಿದು ಕೈತೊಳೆಯುವ ಒಳಗೆ ವಿಚ್ಛೇಧನವಾಗುತ್ತಿದೆ. ಕೌಟುಂಬಿಕ ವ್ಯವಸ್ಥೆ ಕಳಚಿ ಬೀಳುತ್ತಿದೆ. ಇವತ್ತು ಏನಾಗಿದೆ? ಶಿಕ್ಷಣ ಆ ಮಟ್ಟಕ್ಕೆ ಹೋಗಿದೆ. ಹಿಂದೆ ಮಗಳನ್ನ ಧಾರೆ ಎರೆದು ಕೊಟ್ಟಾಗ ಸಹನೆಯೊಂದಿಗೆ ಸಾಗಲು ತಾಯಿ ಹೇಳಿಕೊಡುತ್ತಿದ್ದಳು. ಅದು ಮಾಯವಾಗಿದೆ. ಕುಟುಂಬ ವ್ಯವಸ್ಥೆ ಎಡುವುದರ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಮೇರಿಕಾಕ್ಕಿಂತ ಹೆಚ್ಚು ವಿವಾಹ ವಿಚ್ಛೇದನ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ರೈತರು ಮದುವೆಯಾಗುತ್ತಿಲ್ಲ. ಇತ್ತೀಚೆಗೆ ರೈತನಾಗಲು ಯಾರಿಗೂ ಇಷ್ಟವಾಗಿಲ್ಲ. ಶ್ರಮ ಜೀವನಕ್ಕೆ ನಾವು ಬೆನ್ನು ತೋರಿಸುತ್ತಿದ್ದೇವೆ. ಮಗಳಿಗೆ ಕಷ್ಟವಾಗಬಾರದು ಎಂಬ ಮನೋಭಾವನೆ ಹೆಚ್ಚಾಗಿದೆ. ರೈತನನ್ನ ಮದುವೆಯಾಗಬೇಕೆಂಬ ಸಂದೇಶ ನಮ್ಮಲ್ಲಿ ಮಾಯವಾಗಿರುವ ಬಗ್ಗೆ ಮತ್ತು ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳೇ ಬೇಡ ಎಂಜಾಯ್ ಮಾಡಿ ಹೀಗೆ ಸಾವನ್ನಪ್ಪೋಣ ಎಂಬ ಮನೋಭಾವನೆ ಹೆಚ್ಚಾಗಿದೆ. ಒಂದು ಸಮುದಾಯ 2047 ನೇ ಇಸವಿಗೆ ನಮ್ಮ ಸಂಖ್ಯೆ ಮತ್ತು ಅಧಿಕಾರ ನಮಗೆ ಸಿಗಲಿದೆ. ಇದು ನನ್ನ ಸ್ನೇಹಿತ ಹೇಳಿರೋದು. ಆದರೆ ಅದು ಗಂಭೀರವಾದ ವಿಷಯವೂ ಹೌದು. ನಮ್ಮಮಕ್ಕಳು ಮಿಲ್ಟ್ರಿ, ಐಎಎಸ್ ಐಪಿಎಸ್ ನಂತಹ ಉನ್ನತ ಹುದ್ದೆಗೆ ಹೋಗುತ್ತಿಲ್ಲ. ಆ ಜಾಗವನ್ನ ಅವರು ಆಕ್ರಮಿಸಿಕೊಳ್ಳಲಿದ್ದಾರೆ. ಹೀಗಾಗಿ ಅದನ್ನ ಆತ ಹೇಳಿದ್ದು. ಹೇಳಿರುವುದರಲ್ಲಿ ಅರ್ಥವೂ ಇದೆ ಎಂದರು.
MLA concerned about family matters