" alt="ad">

ಶಾಸಕಿಯಿಂದ ಕಿರುಚಿತ್ರ ಬಿಡುಗಡೆ-MLA releases short film

 SUDDILIVE || SHIVAMOGGA

ಶಾಸಕಿಯಿಂದ ಕಿರುಚಿತ್ರ ಬಿಡುಗಡೆ-MLA releases short film

Short, film

ಪ್ರಸ್ತುತ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಮನಗಳ ಅರಿತು ಮನ ಮುಟ್ಟುವಂತೆ ಕಿರುಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರನಾಯ್ಕ ಹೇಳಿದರು.

ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದ ಗುಜ್ಜರ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವ ನಿರ್ಧನಿ ಕಿರುಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಆರೋಗ್ಯವನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಶಾಲೆ ಕಾಲೇಜುಗಳಿಗೆ ಹಣ ಪಾವತಿ ಮಾಡುತ್ತಾರೆ. ಕೆಲ ಕಷ್ಟಕರ ಸಂದರ್ಭ ಪರೀಕ್ಷಾ ಶುಲ್ಕ ಕಟ್ಟಲು ಆಗದೆ ಪ್ರತಿಭೆಗಳು ಕಮರಿ ಹೋಗುತ್ತವೆ ಎಂಬುದಕ್ಕೆ ಸಾಕ್ಷಿ ಯಾಗಿ ಈ ಚಿತ್ರ ಮೂಡಿ ಬಂದಿದೆ. ಹೆಚ್ಚು ಜನರು ವೀಕ್ಷಿಸಿ ಯಶಸ್ವಿಯಾಗಿ ನಿರ್ಧನಿ ಎಲ್ಲರ ದನಿ ಆಗಲಿ ಎಂದು ಶುಭ ಹಾರೈಸಿದರು.


ಚಿತ್ರದ ಯುವ ನಿರ್ದೇಶಕ ಸಂಕೇತ್ ಗುಜ್ಜರ್ ಮಾತನಾಡಿ, ಕಾಲೇಜು ಜೀವನದಲ್ಲಿ ಕಂಡ ದೃಷ್ಯ ವನ್ನು ಚಿತ್ರವನ್ನಾಗಿ ಮಾಡಬೇಕೆಂಬ ಆಸೆ ಇತ್ತು. ಆ ಬಗ್ಗೆ ಸ್ನೇಹಿತರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿದಾಗ ಪ್ರೋತ್ಸಾಹ ನೀಡಿದರು. ಅವರೆಲ್ಲರ ಸಹಕಾರ ದಿಂದ ಸಾಮಾಜಿಕ ಕಿರುಚಿತ್ರ ನಿರ್ಧನಿ ಉತ್ತಮವಾಗಿ ಮೂಡಿ ಬಂದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕ ಹಾಗೂ ರಂಗಕರ್ಮಿ ಡಾ.ಸಾಸ್ಟೆಹಳ್ಳಿ ಸತೀಶ್, ಭಾವಸಾರ ಕ್ಷತ್ರಿಯಾ ಸಮಾಜದ ಜಿಲ್ಲಾಧ್ಯಕ್ಷಗಜೇಂದ್ರ ಮಾಳೋದೆ, ಸಹಕಾರ ಸಂಘದ ಸಂತೋಷ್ ಸಾಕ್ರೆ ಪಾತ್ರಧಾರಿಗಳಾದ da ನಾಗಭೂಷಣ್, ಬಿ.ಷಣ್ಮುಖಪ್ಪ, ಡಿ.ಪಂಪಾಪತಿ ನಾಗಲಾಪುರ, ಹೇಮಾ ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಎನ್.ಉದಯಕುಮಾ‌ರ್, ಸ್ಥಳೀಯರಾದ ರಾಘವೇಂದ್ರ, ಎಚ್.ಜೆ. ಆದರ್ಶ್‌ ಕುಮಾರ್ ಮತ್ತಿತರರು ಹಾಜರಿದ್ದರು.

MLA releases short film

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close