ಅರಣ್ಯ ಜಂಟಿ ಸರ್ವೆ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ-Protest demanding correction of forest joint survey

 SUDDILIVE || SHIVAMOGGA

ಅರಣ್ಯ ಜಂಟಿ ಸರ್ವೆ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ-Protest demanding correction of forest joint survey shortcomings

Forest, survey


ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರವು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಕಾರ್ಯಾಚರಣೆಯು ಲೋಪ ದೋಷದಿಂದ ಕೂಡಿದೆ ಎಂದು ಆರೋಪಿಸಿ ಇಂದು ಮಲೆನಾಡ ರೈತ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಈ ಪ್ರತಿಭಟನೆಗೆ  ಶ್ರೀ ನಾರಾಯಣ ಗುರು ವಿಚಾರವೇದಿಕೆ ಸಂಘಟನೆ ಕೈಜೋಡಿಸಿದೆ.

ಮುಳುಗಡೆ ಸಂತ್ರಸ್ತರಿಗೆ ಕೊಡಲಾಗಿರುವ ಎಲ್ಲ ಜಮೀನುಗಳ ಜಂಟಿ ಸರ್ವೆ ನಡೆಸಬೇಕು ಈಗಿನ ಸರ್ವೆಯಲ್ಲಿ ಏನೇನು ಲೋಪದೋಷಗಳಿವೆ ಕೊರತೆಗಳಿವೆ ಎನ್ನುವುದನ್ನು ರೈತ ಪ್ರತಿನಿಧಿಗಳನ್ನು ಜೊತೆಗಿಟ್ಟುಕೊಂಡು ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು ಸರ್ವೋಚ್ಚ ನ್ಯಾಯಾಲವೂ ಮೇಲಿನಂತೆ ಸೂಚನೆ ಕೊಡುವ ಸಂದರ್ಭದಲ್ಲಿ ಯಾವುದೇ ಶರತ್ತುಗಳನ್ನು ಹಾಕದಿರುವುದನ್ನು ಪರಿಗಣಿಸಬೇಕು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಜಮೀನಿನ ಹಕ್ಕುವು ಪರಿತಪಿಸುತ್ತಿರುವ ಸಂತ್ರಸ್ಥರ ಸಮಸ್ಯೆಯನ್ನು ಮಾನವೀಯವಾಗಿ ಪರಿಶೀಲಿಸಿ ಅವರ ಭೂಮಿ ಸಂಬಂಧಿತ ಎಲ್ಲಾ ತೊಂದರೆಗಳನ್ನು ಬಗೆಹರಿಸಿ ಕೊಡಬೇಕು ಸಂತ್ರಸ್ತ ರೈತರ ಜಮೀನಿನ ದಾಖಲೆಗಳು ಪೂರ್ಣ ಸ್ವರೂಪದಲ್ಲಿ ರೈತರಿಗೆ ಸಿಗುವಂತೆ ಕ್ರಮ ವಹಿಸಬೇಕು ಬೇಡಿಕೆಯನ್ನು ಮನವಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು

ಪ್ರತಿಭಟನೆಯಲ್ಲಿ ಶರವತ್ತಿ ಭೂಮಿ ವಂಚಿತರ ಹೋರಾಟ ಸಮಿತಿ ಚೀನಾ ಶ್ರೀನಿವಾಸ್ ಸುಧಾಕರ ಎನ್ ಆರ್ ಪ್ರವೀಣ್ ಶಾಸಕರಾದ ಆರಗ ಜ್ಞಾನೇಂದ್ರ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತಿತರರು ಭಾಗಿಯಾಗಿದ್ದರು.

Protest demanding correction of forest joint survey

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close