SUDDILIVE || SHIVAMOGGA
ಜುಲೈ.15 ರ ಒಳಗೆ ಭದ್ರ ಅಚ್ಚುಕಟ್ಟುದಾರರಿಗೆ ನೀರು ಬಿಡದಿದ್ದರೆ ಬೃಹತ್ ಪ್ರತಿಭಟನೆ-Rajya Raitha sangha protest after July 15th
ಭದ್ರ ಬಲದಂಡೆಯಿಂದ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗೆ ಜಲಜೀವನ ಮಿಷನ್ ಯೋಜನೆಗೆ ಜಲಜೀವನ್ ಮಿಷನ್ ಗೆ ನೀರು ಹರಿಸುವ ಬಗ್ಗೆ ರಾಜ್ಯ ರೈತ ಸಂಘ ವಿರೋಧಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜಪ್ಪ ನದಿಪಾತ್ರದಿಂದ ನೀರು ಕೊಡಲು ವಿರೋಧವಿದೆ. ವರ್ಷವಿಡಿ ನದಿಪಾತ್ರದಿಂದ ಅವಕಾಶವಿಲ್ಲ ನದಿಯಿಂದ ಕೊಡಲಿ. ಜುಲೈ.15 ರಿಂದ ಅಣೆಕಟ್ಟಿನಿಂದ ನೀರುಬಿಡಲಾಗುತ್ತಿದೆ..
ಅಚ್ಚುಕಟ್ಟುದಾರರಿಗೆ 71 ಅಡಿ ಟಿಎಂಸಿ ಸಂಗ್ರಹದ ಅಣೆಕಟ್ಟು ಸಾಮರ್ಥ್ಯದಲ್ಲಿ 42%, ನೀರು ಸಂಗ್ರಹವಿದೆ. ತಾಂತ್ರಿಕ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಲದಂಡೆ ಯೋಜನೆಯಿಂದ 1600 ಕೋಟಿ ವೆಚ್ಚದಲ್ಲಿ ದಿನ 30 ದಿನಗಳಲ್ಲಿ ವರ್ಷವಿಡಿ ಒಂದು ಟಿಎಂಸಿ ನೀರು ಕೊಡಲಾಗುತ್ತಿದೆ. 8 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶುದ್ಧೀಕರಣದ ಘಟಕಕ್ಕೆ ಪೂರೈಸಲಾಗುತ್ತಿದೆ.
ಅನುಷ್ಠಾನವನ್ನ ಪಂಚಾಯತ್ ರಾಜ್ ಇಲಾಖೆ ಎಂದು ಹೇಳಲಾಗುತ್ತಿದೆ. ನೀರು ಬಿಡಲು ಸಮಯ ಹತ್ತಿರವಾಗಿದೆ. ಅಚ್ಚುಕಟ್ಟು ಪ್ರದೇಶದಾರರಿಗೆ ವಾಲ್ ಕಟ್ಟಿ ಜಲಜೀವನ್ಮಿಷನ್ ಯೋಜನೆ ನಿರ್ಮಿಸಬೇಕಿತ್ತು. ಆ ಮುಂಜಾಗೃತ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಯುತ್ತಿದೆ.
ಒಂದುವೇಳೆ ಜುಲೈ15 ರ ನಂತರ ಅಚ್ಚುಕಟ್ಟುದಾರರಿಗೆ ಜಲಾಶಯದಿಂದ ನೀರು ಬಿಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ಕಾರಣ ಮತ್ತು ರಾಜ್ಯ ರೈತ ಸಂಘ ಪ್ರತಿಭಟಿಸಲಾಗುತ್ತಿದೆ. ದೇವನಹಳ್ಳಿ ರೀತಿಯಲ್ಲಿ ಪ್ರತಿಭಟನೆ ನಡೆಸುವ ಅನಿವಾರ್ಯ ಎದುರಾಗಿದೆ. ಈಗ ಜಲಜೀವನ್ ಮಿಷನ್ ಕೆಲಸ ನಿಂತಿದೆ. ತಾಂತ್ರಿಕ ವರದಿ ಬಂದ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.
Rajya Raitha sangha protest after July 15th