SUDDILIVE || BANGLORE
ಆರತಿ ಕೃಷ್ಣ ಸೇರಿದಂತೆ ನಾಲ್ವರ ಹೆಸರು ಬಹುತೇಕ ಖಚಿತ, ಅಧಿಕೃತ ಘೋಷಣೆ ಒಂದೇ ಬಾಕಿ-The names of four including Aarti Krishna are almost confirmed, the official announcement is pending.
ರಾಜ್ಯ ವಿಧಾನ ಪರಿಷತ್ ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮೂಲಕ ಭರ್ತಿ ಮಾಡಲು ಅವಕಾಶ ಇರುವುದರಿಂದ ಈ ಸ್ಥಾನಗಳಿಗೆ ಆಯ್ಕೆ ಆಗಲು ನಾಲ್ವರ ಹೆಸರು ಬಹುತೇಕ ಫೈನಲ್ ಹಾಗಿದೆ.
ದಲಿತ ಮುಖಂಡ ಡಿಜಿ ಸಾಗರ್ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾಜಿ ಎಮ್ ಎಲ್ ಸಿ ರಮೇಶ್ ಬಾಬು ಬೇಗನೆ ರಾಮಯ್ಯನವರ ಪುತ್ರಿ ಹಾಗೂ ಎನ್ ಆರ್ ಐ ಅಧ್ಯಕ್ಷ ಆರತಿ ಕೃಷ್ಣ ಹೆಸರುಗಳು ಫೈನಲ್ ಆಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ.
ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳು ಖಾಲಿಯಾಗಿದ್ದು, ನಾಮನಿರ್ದೇಶನ ಪ್ರಕ್ರಿಯೆ ಏಪ್ರಿಲ್ ನಲ್ಲೇ ಆರಂಭವಾಗಿತ್ತು. ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್ನ ಯು.ಬಿ.ವೆಂಕಟೇಶ್, ಪ್ರಕಾಶ್ ರಾಠೋಡ್ ಮತ್ತು ಜೆಡಿಎಸ್ ನ ಕೆ.ಎಂ. ತಿಪ್ಪೇಸ್ವಾಮಿ ಅವರ ಅವಧಿ ಜನವರಿಗೆ ಕೊನೆಗೊಂಡಿದೆ. ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿ.ಪಿ.ಯೋಗೇಶ್ವರ್ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಆಡಳಿತಾರೂಢ ಕಾಂಗ್ರೆಸ್ ಗೆ ಅವಕಾಶ ಇತ್ತು.
ಆರಂಭದಲ್ಲಿ ಒಕ್ಕಲಿಗ ಸಮುದಾಯದಿಂದ ಬಿ ಎಲ್ ಶಂಕರ್, ರಘುನಂದನ್ ರಾಮಣ್ಣ, ವಿನಯ್ ಕಾರ್ತಿಕ್ ಹೆಸರು ಮುನ್ನೆಲೆಗೆ ಬಂದಿತ್ತು. ಒಬಿಸಿ ಸಮುದಾಯದಿಂದ ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನದ ರಮೇಶ್ ಬಾಬು, ಈಡಿಗ ಸಮುದಾಯದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಹಿಂದುಳಿದ ವರ್ಗಗಳ ಆಯೋಗದ ದ್ವಾರಕನಾಥ್ ದ್ವಾರಕನಾಥ್, ದಲಿತ ಸಮುದಾಯದಿಂದ ಡಿಜಿ ಸಾಗರ್ ಹಾಗೂ ಮೈಸೂರಿನ ಪತ್ರಕರ್ತ ಶಿವಕುಮಾರ್ ಅವರ ಹೆಸರು ಸಹ ಮುನ್ನೆಲೆಗೆ ಬಂದಿದ್ದು ಕೊನೆಯದಾಗಿ ಈ ನಾಲ್ವರ ಹೆಸರು ಅಂತಿಮ ಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ
The names of four including Aarti Krishna are almost confirmed