SUDDILIVE || SHIVAMOGGA
ಅವಿನಾಶ್ ಕೊಲೆ ಆರೋಪಿಗಳು ಬಂಧನ-Avinash murder accused arrested
ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ಅವಿನಾಶ್ ನ ಕೊಲೆಗೆ ಸಂಬಂಧಪಟ್ಟಂತೆ ಇವರು ಆರೋಪಿಗಳನ್ನು ವಿನೋದ್ ನಗರ ಪೊಲೀಸರು ಬಂಧಿಸಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕೊಲೆಗೀಡಾದ ಅವಿನಾಶನು ಆರೋಪಿಯೊರ್ವನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರದಲ್ಲಿ ಭಾನುವಾರ ಬೆಳಗಿನ ಜಾವ ಬೊಮ್ಮನಕಟ್ಟೆ ಕೆರೆ ಏರಿಯಾದಲ್ಲಿ ಹೆಣವಾಗಿ ಪತ್ರ ಆಗಿದ್ದನು.
ಎರಡು ದಿನಗಳ ಹಿಂದೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯದ ಮುಂಭಾಗ ಪೊಲೀಸರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಬೊಮ್ಮನಕಟ್ಟೆ ಬಡಾವಣೆ ನಿವಾಸಿಗಳಾದ ಪ್ರವೀಣ್ (35), ಆನಂದ (35), ಸುನಿಲ್ (30), ಜಿತೇಂದ್ರ (28) ಹಾಗೂ ಕಿರಣ್ (34), ಎಂಬುವರನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದರು ಇವರೆಲ್ಲರೂ ಕೃಷಿ ಕೆಲಸ ಮಾಡಿಕೊಂಡಿದ್ದು ಅವಿನಾಶನ ಸಂಬಂಧಿಕರು ಹಾಗೂ ಪರಿಚಯಸ್ತರು ಎಂಬ ಮಾಹಿತಿ ತಿಳಿದು ಬಂದಿದೆ.
ಆರಂಭದಲ್ಲಿ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಅವಿನಾಶ್ ಕೊಲೆಯ ಸಂಖ್ಯೆಯ ವ್ಯಕ್ತವಾಗಿತ್ತು ಆದರೆ ಈ ಅವಿನಾಶನ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಅವಿನಾಶನ ಕೊಲೆ ಪ್ರಕರಣ ನಡೆದಿರುವಾಗಿ ತಿಳಿದು ಬಂದಿದೆ.
Avinash murder accused arrested