ಗೊಬ್ಬರದ ಬೆಲೆ ಹೆಚ್ಚಳದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಪ್ರತಿಭಟನೆ- protests against fertilizer price hike

SUDDILIVE || SHIVAMOGGA

SUDDILIVE || SHIVAMOGGA 

ಗೊಬ್ಬರದ ಬೆಲೆ ಹೆಚ್ಚಳದ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಪ್ರತಿಭಟನೆ- Shivamogga Rural Youth Congress protests against fertilizer price hike

Protest, fertilizer


ಅಚ್ಚೆದಿನ್ ಆಯೇಗಾ ಎಂದು ಹೇಳಿಕೊಂಡೇ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಆರಂಭದಿಂದಲೂ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಲೇ ಬಂದಿದ್ದು, ಇದೀಗ ರೈತರ ಬೆಳೆಗಳಿಗೆ ವಿತರಿಸುವ ರಾಸಾಯನಿಕ ರಸಗೊಬ್ಬರಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಇದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.

ಕಳೆದ ವರ್ಷ ಇಫ್ಕೋ 15-15-15 ರಸಗೊಬ್ಬರದ ಬೆಲೆ 1250 ರೂ.ಗಳಿದ್ದು, ಈ ವರ್ಷ 1650 ರೂ.ಗಳಿಗೆ ಹಚ್ಚಿಸಲಾಗಿದೆ. ಅದೇ ರೀತಿ ಆರ್.ಸಿ.ಎಫ್. 15-15-15ರ ಬೆಲೆ 1470 ರೂ.ಗಳಿದ್ದದ್ದು, ಈ ವರ್ಷ 1650 ರೂ.ಗಳಾಗಿದೆ. ಇಫ್ಕೋ 10-26-26 ಕಳೆದ ವರ್ಷ 1470 ರೂ.ಗಳಿದ್ದದ್ದು, ಈಗ 1725 ರೂ.ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಹಿಂದೆ 1250 ರೂ ಇದ್ದ  20-20-0-13 ರ ಬೆಲೆ 1300 ರೂ.ಗಳಿಗೆ, 12-32-16 ರ ಬೆಲೆ 1470  ರೂ.ಗಳಿಂದ 1725 ರೂ.ಗಳಿಗೆ ಏರಿಕೆಯಾಗಿದೆ. 

 20-20-20ರ ಬೆಲೆ 1020ರೂ.ಗಳಿಂದ 1360 ರೂ.ಗಳಿಗೆ, ಯೂರಿಯಾ ಬೆಲೆ 266 ರೂ.ಗಳಿಂದ 280 ರೂ.ಗಳಿಗೆ ಹಾಗೂ ಎಂಒಪಿ ( ಪೋಟ್ಯಾಶ್ ) 1550 ರಿಂದ 1750 ಕ್ಕೆ 200 ರೂಗಳ ಹೆಚ್ಚಳ ಮಾಡಲಾಗಿದೆ. ಈ ರೀತಿ ರಸಗೊಬ್ಬರಗಳ ಬೆಲೆ ಹೆಚ್ಚಳ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಇದು ಖಂಡನೀಯವಾಗಿದೆ.

 ಕೇಂದ್ರ ಬಿಜೆಪಿ ಸರ್ಕಾರ ಒಂದೆಡೆ ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ 4 ಸಾವಿರ ರೂ.ಗಳನ್ನು ನೀಡಿ,  ಹಿಂಬಾಗಿಲಿನಿಂದ  ಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಮೂಲಕ ಅದಕ್ಕಿಂತ ದುಪ್ಪಟ್ಟು ಹಣವನ್ನು ರೈತರಿಂದ ವಸೂಲು ಮಾಡುತ್ತಿದೆ.

ಮಳೆಯ ಅನಿಶ್ಚಿತತೆ, ಅತಿವೃಷ್ಟಿ, ಅನಾವೃಷ್ಟಿಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಬೆಳೆಹಾನಿ ಮುಂತಾದ ಕಾರಣಗಳಿಗೆ ರೈತರ ಆತ್ಯಹತ್ಯೆಗಳೂ ನಡೆಯುತ್ತಿವೆ. ಇದರ ಮಧ್ಯೆ ಕೇಂದ್ರದ ಬಿಜೆಪಿ ಸರ್ಕಾರ ಏಕಾಏಕಿ ಅವೈಜ್ಞಾನಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿದರೆ, ಮೊದಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ.

 ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆ ಇಳಿಕೆ ಮಾಡದಿದ್ದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ಆದ್ದರಿಂದ ಕೂಡಲೇ ಗೌರವಾನ್ವಿತ ರಾಷ್ಟ್ರಪತಿಗಳು  ಮಧ್ಯ ಪ್ರವೇಶಿಸಿ, ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ರಸಗೊಬ್ಬರಗಳ ಬೆಲೆಯನ್ನು ಇಳಿಕೆ ಮಾಡುವಂತೆ ಸೂಕ್ತ ನಿರ್ದೇಶನ ಮಾಡಬೇಕೆಂದು ಈ ಮೂಲಕ ಯುವ ಕಾಂಗ್ರೆಸ್ ಒತ್ತಾಯಿಸುತ್ತಿದೆ ಮನವಿಯನ್ನು ಜಂಟಿ ಕೃಷಿ ನಿರ್ದೇಶಕರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಹಾಪ್ ಕಾಮ್ಸ್  ಅಧ್ಯಕ್ಷರಾದ ವಿಜಯ್ ಕುಮಾರ್ , ಹಾಲಪ್ಪ, ಶಿವಾನಂದ್,  ಕಿಸಾನ್ ಸೆಲ್ ಕಾರ್ಯಾಧ್ಯಕ್ಷರಾದ ಗಿರೀಶ್, ಯುವ ಮುಖಂಡರಾದ ಮಧುಸೂದನ್, ಚೇತನ್, ನಜಮ್ , ಇಮ್ರಾನ್, ನೂರು, NSUI ರಾಜ್ಯ ಕಾರ್ಯದರ್ಶಿ ಬಾಲಾಜಿ , ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ನ ಅಧ್ಯಕ್ಷ ಪ್ರವೀಣ್, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್, ಬ್ಲ್ಯಾಕ್ ಅಧ್ಯಕ್ಷರುಗಳಾದ ಪ್ರವೀಣ್ ಪಾಟೀಲ್, ಶಶಿಕುಮಾರ್, ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತರ್, ಅಶೋಕ್, ಮಲ್ಗೊಪ್ಪ ಶಿವು, ಗೌತಮ್, ತೌಫಿಕ್, ಅನಿಲ್ ಪಾಟೀಲ್, ನಾಗೇಂದ್ರ ಆಟೋಕ್, ಬಾಬು, ಧನು, ಪ್ರಜ್ವಲ್, ಶಿವಕುಮಾರ್, ಸಂತೋಷ್, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು

protests against fertilizer price hike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close