SUDDILIVE || SHIVAMOGGA
25ರಂದು ಶಿವಮೊಗ್ಗದಲ್ಲಿ ಎದೆಯ ಹಣತೆ ವಿಭಿನ್ನ ರಂಗಪ್ರಸ್ತುತಿ-A different stage performance with a different theme in Shivamogga on the 25th
ಬುಕರ್ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ `ಎದೆಯ ಹಣತೆ' ಹಾಗೂ `ಒಮ್ಮೆ ಹೆಣ್ಣಾಗು ಪ್ರಭುವೆ' ಎರಡು ಕತೆಗಳ ವಿಭಿನ್ನ ರಂಗಪ್ರಸ್ತುತಿ ಇದೇ ತಿಂಗಳ 25ರಂದು ಸಂಜೆ 5.30ಕ್ಕೆ ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ನೇಟಿವ್ ಥಿಯೇಟರ್ ಸಂಸ್ಥೆ ಪ್ರಸ್ತುತಪಡಿಸಲಿರುವ ಈ ವಿಶೇಷ ರಂಗಪ್ರಸ್ತುತಿಯನ್ನು ಹಾಲಸ್ವಾಮಿ ಆರ್.ಎಸ್. ನಿರ್ದೇಶನ ಮಾಡಿದ್ದಾರೆ. ಈ ಎರಡೂ ಕತೆಗಳನ್ನು ಡಾ. ಹೆಚ್.ಎಸ್. ನಾಗಭೂಷಣ್ ಹಾಗೂ ಭಾರತಿದೇವಿ ಪಿ. ಪ್ರಸ್ತುತಪಡಿಸಲಿದ್ದಾರೆ. ಹಿಂದೂಸ್ತಾನಿ ಗಾಯಕ ನೌಷಾದ್ ಹರ್ಲಾಪುರ್ ಅವರ ಗಾಯನ ಮತ್ತು ಶಂಕರ್ ಬೆಳಲಕಟ್ಟೆ ಅವರ ಬೆಳಕು, ರಂಗಸಜ್ಜಿಕೆ ಈ ಪ್ರದರ್ಶನಕ್ಕೆ ಇದೆ. ಸಾಹಿತಿ ಅಕ್ಷತಾ ಹುಂಚದಕಟ್ಟೆ ಅವರು ಬಾನು ಮುಷ್ತಾಕ್ ಅವರ ಬದುಕು-ಬರಹ-ಬುಕರ್ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಸಾಹಿತ್ಯ ಕೃತಿಯೊಂದನ್ನು ಈ ರೀತಿ ವೇದಿಕೆಗೆ ಅಳವಡಿಸುತ್ತಿರುವುದು ಇದೇ ಮೊದಲು. ಉಚಿತ ಪ್ರವೇಶವಾಗಿದ್ದು, ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲದ ಈ ವಿಭಿನ್ನ ರಂಗಪ್ರಸ್ತುತಿಗೆ ಸಾಹಿತ್ಯಾಭಿಮಾನಿಗಳು ಹಾಗೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತವಂತೆ ನೇಟಿವ್ ಥಿಯೇಟರ್ ಪ್ರಕಟಣೆ ಕೋರಿದೆ.
A different stage performance