SUDDILIVE || SHIVAMOGGA
ಹಂದಿ ವಿಚಾರದಲ್ಲಿ ಕಿರಿಕ್-ಗಲಾಟೆ-Controversy over pork
ಹಂದಿ ಕಟ್ಟಿ ಹಾಕುವ ವಿಚಾರದಲ್ಲಿ ಮಾರಾಮಾರಿ ನಡೆದಿದೆ ಏಳು ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮಂಜುನಾಥ ಬಡಾವಣೆಯಲ್ಲಿ ಘಟನೆ ನಡೆದಿದ್ದು ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ.
ಮುರುಳಿ ಗಿರೀಶ ಸುರೇಶ ಪಾಂಡೆ ಜಗದೀಶ ಅಣ್ಣಮಲೈ ಹಾಗೂ ಇತರೆ ಐದು ಜನರ ವಿರುದ್ಧ ಹಲ್ಲೆ ಮಾಡಿರುವ ಆರೋಪದಡಿ ದೂರು ದಾಖಲಾಗಿದೆ ಅಣ್ಣಪ್ಪ ಎಂಬುವರು ಸಹೋದರ ಪಳನಿಯ ಮದುವೆಗೆ ಜೂನ್ 15ರಂದು ತಮಿಳ್ನಾಡಿಗೆ ಹೋಗುವ ಸಲುವಾಗಿ ಅವರು ಸಾಕಿದ ಹಂದಿಗಳಿಗೆ ನೋಡಿಕೊಳ್ಳುವಂತೆ ಏಳುಮಲೈ ಎಂಬುವರಿಗೆ ವಹಿಸಿ ಹೋಗಿದ್ದರು.
ಆದರೆ ಮಂಜುನಾಥ ಬಡಾವಣೆ ಎರಡನೇ ತಿರುವಿನಲ್ಲಿರುವ ಅಣ್ಣಮಲೈ ರವರ ಮಗ ಮುರಳಿ ಮತ್ತು ಅವರ ಸಂಬಂಧಿ ಸುರೇಶ್ ಅಣ್ಣಪ್ಪನವರ ಹಂದಿಗಳನ್ನು ಕಟ್ಟಿ ಹಾಕಿದ್ದರು. ಏಳು ಮಲೈಯವರನ್ನ ನೋಡಿ ಹಂದಿಗಳನ್ನ ಬಿಟ್ಟಿದ್ದರು. ಹಂದಿಗಳನ್ನು ಕಟ್ಟಿ ಹಾಕಿರುವ ಬಗ್ಗೆ ಹೇಳು ಮಲೈ ಅಣ್ಣಪ್ಪ ಅವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ತಿಳಿಸಿದ್ದರು ಮದುವೆ ಮುಗಿದ ಮೇಲೆ ನೋಡಿಕೊಳ್ಳೋಣ ತಿಳಿಸಿದ್ದರಿಂದ ಈ ಪ್ರಕರಣ ತಣ್ಣಗಾಗಿತ್ತು.
ಜೂನ್ 18ರಂದು ಮದುವೆ ಮುಗಿಸಿಕೊಂಡು ಅಣ್ಣಪ್ಪ ಶಿವಮೊಗ್ಗಕ್ಕೆ ವಾಪಸ್ ಆಗಿದ್ದು ಆಮೇಲೆ ಏಳುಮಲೈ ಬೇಟಿಯಾಗಿ ಅವರನ್ನು ಬರ ಮಾಡಿಕೊಂಡಿದ್ದನು ನಂತರ ಮೂತ್ರ ವಿಸರ್ಜನೆಗೆ ಡಿಪೋರಸ್ತೆಯಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ಮುರಳಿ ಪಾಂಡೆ ಗಿರೀಶ ಸುರೇಶ ಮತ್ತು ಜಗದೀಶ ನಾವು ಹಂದಿ ಕಟ್ಟಿ ಹಾಕಿದ್ದನ್ನು ಅಣ್ಣಪ್ಪನಿಗೆ ಹೇಳ್ತೀಯಾ ಎಂದು ಅಲ್ಲೇ ಇದ್ದ ಕಲ್ಲಿನಿಂದ ಏಳುಮಲೈ ಮೇಲೆ ದಾಳಿ ನಡೆಸಿದನು ಏಳು ಮಲೈ ಅಣ್ಣಪ್ಪ ಇವರ ಮೇಲೆ ಮುರುಳಿ ಮತ್ತು ಆತನ ತಂಡ ಕೊಂಡಿತ್ತು ಗಲಾಟೆ ಬಿಡಿಸಲು ಬಂದಿದ್ದ ಅಣ್ಣಪ್ಪನ ಪತ್ನಿ ಜ್ಯೋತಿ ಲಕ್ಷ್ಮಿ ಮತ್ತು ತಂದೆ ಮಂಜಪ್ಪ ರವರ ಮೇಲು ಮುರುಳಿ ಪಾಂಡೆ ತಂಡ ತಿಳಿಸಿತ್ತು ಪತ್ನಿ ಜ್ಯೋತಿಲಕ್ಷ್ಮಿಯನ್ನು ಹಿಡಿದು ಎಳೆದಾಡಿ ಅವರ ಎಡ ಕಿವಿಯನ್ನು ಹರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Controversy over pork