SUDDILIVE || SHIVAMOGGA
ಬಿಜೆಪಿ ಕಚೇರಿ ಮುತ್ತಿಗೆ ಯತ್ನ- BJP office siege attempt
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ವಿರುದ್ಧ ಅನಗತ್ಯ ಇಡಿ ಪ್ರಭಾವ ಬೀರಿ ತೊಂದರೆ ನೀಡಿರುವುದನ್ನ ಖಂಡಿಸಿ ಹಾಗೂ ಮನ್ರೆಗಾ ಹೆಸರನ್ನ ಬದಲಾಯಿಸಿರುವುದನ್ನ ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತು. ಮುತ್ತಿಗೆ ಯತ್ನಿಸಿದ ಕಾಂಗ್ರೆಸ್ ಜಿಲ್ಲಾಮುಖಂಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೈಲ್ ವೃತ್ತದಿಂದ ಬಿಜೆಪಿ ಕಚೇರಿಗೆ ಹೊರಟ ನಾಯಕರನ್ನ ಪೊಲೀಸರು ಬಿಜೆಪಿ ಕಚೇರಿಯ ಬಳಿ ತಡೆದು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಹೆಚ್ ಸಿ ಯೋಗೀಶ್, ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಕೆಪಿಸಿಸಿ ಕಾರ್ಯದರ್ಶ ದೇವೇಂದ್ರಪ್ಪ ಎಸ್ಕೆ ಮರಿಯಪ್ಪ ಮೊದಲಾದವರು ಭಾಗಿಯಾಗಿದ್ದರು.
BJP office siege attempt
