SUDDILIVE || SHIVAMOGGA
ಜಿಪಂ ಸಿಇಒಗೆ ರಾಮ್ ಜಿ ಯೋಜನೆಯನ್ನ ವಿರೋಧಿಸಲು ಸೂಚನೆ ನೀಡಿ ಸಭೆ ನಡೆಸಿ ವರದಿ ನೀಡಲು ಬರವಣಿಗೆಯಲ್ಲಿ ಸೂಚಿಸಲಾಗಿದೆ-ಸಂಸದ-ZP CEO instructed to oppose Ramji Yojana, hold meeting and submit written report - MP
ಊಹಿಸಲು ದಾಧ್ಯವಿಲ್ಲದ ಘಟನೆ ನಿನ್ನೆ ವಿಧಾನ ಸಭೆಯಲ್ಲಿ ನಡೆದಿದೆ ಎಂದು ಸಂಸದರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಸಭೆಯಲ್ಲಿ ರಾಜ್ಯ ಪಾಲರ ಮೇಲಿನ ದಾಳಿ ನಡೆಸಲು ಹಿಂಜರಿಯದ ಕಾಂಗ್ರೆಸ್ ರೌಡಿಗಳಾಗಿದ್ದಾರೆ. ರಾಜ್ಯಪಾಲರ ಮೇಲೆ ಬಿಕೆ ಹರಿಪ್ರಸಾದ್ ಗೂಂಡಾ ವರ್ತನೆ ಬಡೆಸಲು ಯತ್ನಿಸಿದ್ದಾರೆ. ಅಶೋಕ್ ಸಹ ಇದನ್ನ ಖಙಡಿಸಿ ದೂರು ನೀಡಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮವಾಗಬೇಕು ಎಂದು ದೂರಿದರು.
ಪುಸ್ತಕದಲ್ಲಿ ರಾಜ್ಯಪಾಲರು ಓದಿಸಲಾಗುತ್ತದೆ. ಪುಸ್ತಕದಲ್ಲಿ ಕೇಂದ್ರವನ್ನ ಬೈದಿರುವ ಪ್ರಯತ್ನ ನಡೆಸಿ ಅದನ್ನ ರಾಜ್ಯಪಾಲರ ಬಾಯಿಯಲ್ಲಿ ಹೇಳಿಸುವ ಪ್ರಯತ್ನ ನಡೆಸಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತಚನ ನಡೆದಿದೆ. ಹಂಸರಾಜ್ ಭಾರಧ್ವಾಜ್ ರಾಜ್ಯಪಾಲರಾಗಿದ್ದಾಗ ಯಡಿಯೂರಪ್ಪನವರ ಸರ್ಕಾರವನ್ನ ತೆಗೆದೇ ಹೋಗುವ ಶಪಥ ಮಾಡಿದ್ದು ಗೊತ್ತಿದೆ. ಸುಳ್ಳನ್ನ ನೂರು ಬಾರಿ ಹೇಳಿ ರಾನ್ ಜಿ ಯೋಜನೆಯನ್ನ ವಿರೋಧಿಸಲಾಗುತ್ತಿದೆ. ಮಹಾತ್ಮಗಾಂಧಿಯ ಹೆಸರಿನಲ್ಲಿ ಕಾಂಗ್ರೆಸ್ ನತಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಸಂಧರ್ಭಕ್ಕೆ ತಕ್ಕಂತೆ ನರೇಗಾ ಹೆಸರು ಬದಲಿಸಲಾಗಿದೆ. ಜವಾಹಾರ್ ಯೋಜನೆ ಎಂದು ಇದ್ದ ನರೇಗಾ ಮನರೇಗಾ ಆಯಿತು. ಆಗ ಜವಾಹಾರ್ ಹೆಸರನ್ನ ತೆಗೆದಿದ್ದು ಯಾಕೆ ಎಂದು ಯಾರಾದರೂ ಪ್ರಶ್ನಿಸಿದರಾ? ಕೂಲಿ ಹೆಚ್ಚಿಸಿ ಗತಿಶಕ್ತಯೋಜನೆಗೆ ಜೋಡಿಸಲಾಗಿದೆ. ಕಾಂಗ್ರೆಸ್ ಸುಳ್ಳನ್ನ ಹೇಳಲು ಯತ್ನಿಸಿದೆ. ಹಲ್ಲೆ ಮಾಡಲು ಯತ್ನಿಸಿದವರನ್ನ ಮಾರ್ಷಲ್ ಹಿಡಿದೆಳೆದರೆ ಬಿಜೆಪಿ ಹಲ್ಲೆ ನಾಡಿತು ಎಂದು ಸುಳ್ಳು ಹೇಳಲಾಯಿತು ಎಂ್ಉ ದೂರಿದರು.
ಕೇಂದ್ರ ಹಣ ಕೊಡುತ್ತಿಲ್ಲ. ರೈತ ವಿರೋಧಿ ಎಂದು ಕಾಂಗ್ರೆಸ್ ಹೇಳಿದರೆ 3000 ಮೆಟ್ರಿಕ್ ಟನ್ ಜೋಳ ಖರೀದಿಸಿ ಎಂದರೆ ಖರೀದಿ ಕೇಂದ್ರ ಆರಂಭಿಸಿಲ್ಲ. ಬೆಂಬಲ ಬೆಲೆಯನ್ನ ಕಾಂಗ್ರೆಸ್ ಆರಂಭಿಸಿಲ್ಲ. ಹಣಕಾಸು ಯೋಜನೆಯಲ್ಲಿ ಅನ್ಯಾಯವಾಗಿದೆ ಎಂದು ಪತ್ರ ಬರೆಯುತ್ತೀರಿ ಎಂದು ಆಕ್ಷೇಪಿಸಿದರು.
ಗೋ ಬ್ಯಾಕ್ ಗೌವರ್ನರ್ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಹೇಳಿದ್ದನ್ನ ಗಮನಿಸಿದ್ದೇವೆ ಇದು ನಿಮಗೆ ಶೋಭೆ ತರಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ಕಾಂಗ್ರೆಸ್ ಜ್ರಮ ತೆಗೆದುಕೊಂಡು ಉಳಿದ ನಾಲ್ಕೈದು ದಿನ ಗಂಭೀರವಾಗಿ ಚರ್ಚೆ ಮಾಡಿ ಎಂದ ಸಂಸದರು ಜಿಪಂನ ಸಿಇಒಗಳಿಗೆ ರಾಮ್ ಜಿ ವಿರುದ್ಧ ಮೌಕಿಖವಾಗಿ ವಿರೋಧಿಸಿ ಎಂದು ಕಾಂಗ್ರೆಸ್ ಹೇಳಿದ್ದು ಬರವಣಿಗೆಯಲ್ಲಿ ಸಭೆ ನಡೆಸಿ ವರದಿ ಕೊಡಿ ಎಂದು ಸೂಚಿಸಿದೆ ಎಂದು ಒಳಗುಟ್ಟನ್ನ ತಿಳಿಸಿದರು.
ZP CEO instructed to oppose Ramji Yojana, hold meeting and submit written report - MP
