ನಾಳೆ ಚಂದನದ ಶುಭೋದಯದಲ್ಲಿ ಹರೋನಹಳ್ಳಿ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಶಿಕ್ಷಕ ವೃತ್ತಿ ಜೊತೆ ವಿಜ್ಞಾನ, ಸಂಗೀತ, ಖಗೋಳ ಜ್ಞಾನವನ್ನು ಪಸರಿಸುವ ಮೂಲಕ ವಿದ್ಯಾ ಸಂಕುಲದ ವಿಶೇಷ ಶಿಕ್ಷಕ ಹರೋನಹಳ್ಳಿ ಸ್ವಾಮಿ ಅವರು ನಾಳೆ ಚಂದನ ಟಿವಿಯಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಪ್ರಸಾರವಾಗುವ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

ಭದ್ರಾವತಿ ತಾಲ್ಲೂಕಿನ
ಹಿರಿಯೂರಿನ ಎಸ್ ಬಿ ಎಂ ಎಂ ಆರ್ ಪೌಢ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ ಅವರು ಶಿವಮೊಗ್ಗ ಜಿಲ್ಲೆಯ ಪ್ರತಿಭಾವಂತರು. ಅವರು ಖಗೋಳ ವಿಜ್ಞಾನದ ಪ್ರಾತ್ಯಕ್ಷಿಕೆ ಹಾಗೂ ಗಾನದಾರೆಯ ಸಾವಿರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾಳಿನ ಅವರ ಕಾರ್ಯಕ್ರಮವನ್ನು ಶಿಷ್ಯ ವೃಂದ ಹಾಗೂ ಅಭಿಮಾನಿಗಳು ವೀಕ್ಷಿಸಲು ಕೋರಲಾಗಿದೆ.

ಇದನ್ನೂ ಓದಿ-https://suddilive.in/archives/14706

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close