ಸುದ್ದಿಲೈವ್/ಭದ್ರಾವತಿ
ಸೌದಿಯಲ್ಲಿ ಕಾರು ಕೆಲಸ ಮಾಡಿಕೊಂಡಿದ್ದ ಭದ್ರಾವತಿ ತಾಲೂಕಿನ ದೊಣಭಘಟ್ಟ ಮತ್ತು ತಡಸ ಗ್ರಾಮದ ಯುವಕರಿಗೆ ಪರಿಚಯನಾದ ತೆಲಂಗಾಣದ ಯುವಕನೋರ್ವ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಂಬಿಸಿ ಬಂಡವಾಳ ಹಾಕಿಸಿ ಲಕ್ಷಾಂತರ ರೂ ಹಣ ವಂಚಿಸಿರುವ ಘಟನೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರುದಾಖಲಾಗಿದೆ.
ಮಾವೂದ್ ಅಲಿ ಎಂಬ ತಡಸ ನಿವಾಸಿ 13 ವರ್ಷಗಳ ಹಿಂದೆ ಕಾರು ಡ್ರೈವರ್ ಕೆಲಸಕ್ಕೆಂದು ಸೌದಿ ಅರೇಬಿಯಾ ದೇಶದ ರಿಯಾದ್ ಪಟ್ಟಣಕ್ಕೆ ಹೋಗಿದ್ದರು. ಅವರು ಮಾಡಿದ ರೂಂನಲ್ಲಿ ತಡಸ ಹಾಗೂ ಪಕ್ಕದ ಗ್ರಾಮದ ದೊಣಭಘಟ್ಟದಿಂದ ಕೆಲವರು ಕೆಲಸಕ್ಕೆಂದು ಸೌದಿಗೆ ಬಂದಿದ್ದವರು ವಾಸವಾಗಿದ್ದರು.
ಅವರೆಲ್ಲರೂ ಸಹ ಮಾವೂದ್ ಅಲಿ ರೂಮಿನಲ್ಲಿಯೇ ಒಟ್ಟಿಗೆ ವಾಸವಾಗಿದ್ದರು. ಅವರು ವಾಸಿವಿದ್ದ ರೂಮಿನ ಪಕ್ಕದಲ್ಲಿದ್ದ ತೆಲಂಗಾಣ ರಾಜ್ಯದ, ಮಂಚೂರಿ ಜಿಲ್ಲೆ, ಜನರಂ ತಾಲೂಕು, ಕಾವಲ್ ಗ್ರಾಮದ ವಾಸಿ ಅಕ್ರಂ ತಂದೆ ಸರ್ದಾರ್ ಖಾನ್ ಎಂಬುವನು ವಾಸವಾಗಿದ್ದನು.
ಅಕ್ರಂ ಖಾನ್ ಈಗ್ಗೆ 1 ವರ್ಷಗಳಿಂದ ರಿಯಾದ್ ಪಟ್ಟಣದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದನು. ನಂತರದ ದಿನಗಳಲ್ಲಿ ಮಾವುದ್ ಅಲಿ ಮತ್ತು ಸ್ನೇಹಿತರಿಗೆ ಅಕ್ರಂಖಾನ್ ಪರಿಚಯವಾಗಿದ್ದನು. ಅಕ್ರಂ ಖಾನ್ ಪರಿಚಯವಾದ ನಂತರದಲಿ ಅವರ ಊರಿನಲಿ ರಿಯಲ್ ಎಸ್ಟೇಟ್ ಮಾಡಬೇಕು ಎಂದುಕೊಂಡಿದ್ದೇನೆ. ನೀವು ನನ್ನ ಜೊತೆ ಬಂಡವಾಳ ಹಾಕಿ ಲಾಭಕೊಡುವುದಾಗಿ ನಂಬಿಸಿದ್ದನು.
ಮಾವುದ್ ಅಲಿ ಮತ್ತು ಅವರ ರೂಂನಲ್ಲಿದ್ದ ಯುವಕರು ಹಣವನ್ನು ಸೇರಿಸಿ ಆಕ್ರಂಖಾನ್ ಆನ್ ಲೈನ್ ಮುಖಾಂತರ ಹಣಹಾಕಿದ್ದರು. ಹೀಗೆ ಸುಮಾರು 8 ತಿಂಗಳ ಕಾಲ ಮಾವುದ್ ಹಾಗೂ ಅಕ್ರಂಖಾನ್ ಮಧ್ಯೆ ಚೆನ್ನಾಗಿ ವ್ಯವಹಾರ ನಡೆದು ಅಕ್ರಂ ಖಾನ್ ಬಙಡವಾಳ ಹಾಕಿದವರಿಗೆ ಲಾಭ ಕೊಡುತ್ತಿದ್ದನು.
ರಂಜಾನ್ ಹಬ್ಬದವೇಳೆ ಭದ್ರಾವತಿಯ ಊರಿಗೆ ಬಂದಿದ್ದ ಮಾವುದ್ ಅಲಿ ಮತ್ತು ಇತರೆ ಯುವಕರು ತಮ್ಮ ಊರಿನಲ್ಲಿರುವ ಸ್ನೇಹಿತರಿಗೆ ಹೀಗೆ ಅಕ್ರಂಖಾನ್ ಜೊತೆಗಿನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಹೇಳಿದ್ದು. ಲಾಭ ನೀಡಿದ್ದನು ಹೇಳಿದ್ದಾರೆ.
ಊರಿನ ಯುವಕರು ವ್ಯವಹಾರಕ್ಕೆ ಹಣಹಾಕುವುದಾಗಿ ಹೇಳಿದ್ದರು.ಮಾವುದ್ ಅಲಿ ಅಕ್ರಂ ಖಾನ್ ಗೆ ಹೇಳಿದಾಗ ಒಂದು ದಿನ ತಡಸ ಊರಿಗೆ ಬಂದು 41 ಲಕ್ಷ ರೂ. ಹಣವನ್ನ ಗ್ರಾಮದ ಯುವಕರಿಂದ ಸಂಗ್ರಹಿಸಿಕೊಂಡು ಹೋದವನ ಅಡ್ರೆಸ್ ಇರಲಿಲ್ಲ.
ಹಣಬಾರದೆ ಇದ್ದಾಗ ಮಾವುದ್ ಗ್ರಾಮದ ಯುವಕರು ಕರೆ ಮಾಡಿ ಕೇಳಿದಾಗ ಬ್ಯಾಂಕ್ ನ ಖಾತೆ ಬ್ಲಾಕ್ ಆಗಿದೆ ಬ್ಲಾಕ್ ಆದ ಬ್ಯಾಂಕ್ ಖಾತೆಯನ್ನ ತೆಗೆಸಿ ನಂತರ ಹಣಹಾಕುವುದಾಗಿ ಹೇಳಿದ್ದ ಅಕ್ರಂನ ಮೊಬೈಲ್ ನಂಬರ್ ನಂತರ ದಿನಗಳಲ್ಲಿ ಸ್ವಿಚ್ ಆಫ್ ಆಗಿತ್ತು.
ಯುವಕರೇ ಸೇರಿ ತೆಲಂಗಾಣದ ಅಕ್ರಂ ಊರಿಗೆ ಹೋಗಿ ಬಂದ ಯುವಕರಿಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದ್ದು, ಅದನ್ನ ತೆಗೆಸಿದ ಮೇಲೆನೆ ಹಣ ನೀಡುವುದಾಗಿ ಹೇಳಿದ್ದರಿಂದ ಆತನ ಕಥೆ ಬಗೆಹರೆಯಲ್ಲ ಎಂದು ಭಾಗಿಸಿ ಮಾವುದ್ ಅಲಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/18178