ಪ್ರೊ.ಭಗವಾನ್ ಗೆ ಸಂಕಷ್ಟ

ಸುದ್ದಿಲೈವ್/ಮೈಸೂರು

ಸಾಹಿತಿ ಭಗವಾನ್ ವಿರುದ್ಧ ಮೈಸೂರಿನ ಪ್ರಧಾನ ಸಿವಿಲ್ ಮತ್ತು JMFC ನ್ಯಾಯಾಲಯ ಜಾಮೀನು ರಹಿತ ಬಂದನ ವಾರೆಂಟ್ ಹೊರಡಿಸಿದೆ..

ರಾಮ ಮಂದಿರ ಏಕೆ ಬೇಡ ಎಂಬ ವಿವಾದಾತ್ಮಕ ಕೃತಿಯನ್ನು ಪ್ರಕಟಿಸಿದ್ದು ಇದನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿವಾಸಿ ಮಹಾಬಲೇಶ್ವರ ಎಂಬುವರು ಖಾಸಗಿ ಪ್ರಕರಣವನ್ನು ಸಾಗರ ನ್ಯಾಯಾಲಯದಲ್ಲಿ ದಾವೆಹೂಡಿದ್ದರು.

ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಸಾಹಿತಿ ಭಗವಾನ್ ಮೈಸೂರಿಗೆ ವರ್ಗಾವಣೆ ಪಡೆದಿದ್ದರು.ಆದರೆ ಅಲ್ಲಿಯೂ ಸಹ ಗೈರುಹಾಜರಾಗುತ್ತಿದ್ದು ಮೈಸೂರು ಪ್ರಧಾನ ಸಿವಿಲ್ ಮತ್ತು JMFC ನ್ಯಾಯಾಲಯ ಜಾಮೀನು ರಹಿತ ಬಂದನ ವಾರೆಂಟ್ ಹೊರಡಿಸಿದೆ.

ಮೈಸೂರಿಗೆ ವರ್ಗಾವಣೆ ಮಾಡಿಕೊಂಡಿದ್ದ ಭಗವಾನ್ ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ-https://suddilive.in/archives/17987

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close