ಭದ್ರಾವತಿ ನಗರಸಭ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನ ಅಯ್ಕೆಗೆ ತಡೆಯಾಜ್ಞೆ

 


ಸುದ್ದಿಲೈವ್/ಭದ್ರಾವತಿ ಅ24 


ರೂಸ್ಟರ್ ಪದ್ಧತಿ, ಬಿ.ಸಿ.ಎಂ.ಮಹಿಳೆ ಮೀಸಲು ಹಾಗೂ ಬಿ.ಸಿ.ಎಂ.ಬಿ. ಮಹಿಳೆ ಮೀಸಲಾತಿ ಭದ್ರಾವತಿ ನಗರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನ ಅಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯವಾಗಿದೆ ಎಂದು ಅರೋಪಿಸಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗಿದೆ.




ನಗರಸಭಾ ಅಧ್ಯಕ್ಷರ  ತೆರವಾಗಿದ್ದ ಸ್ಥಾನಕ್ಕೆ ಅಗಸ್ಟ್ 26 ರಂದು ಅಧ್ಯಕ್ಷರ ಸ್ಥಾನದ ಚುನಾವಣೆ ನಡೆಯಬೇಕಿದ್ದು, ಅಗಸ್ಟ್ 22 ರಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ದಾವೆ ಹೂಡಿದ ಪರಿಣಾಮ ಉಚ್ಚನ್ಯಾಯಲಯ ಮಂಗಳವಾರ ಅಧ್ಯಕ್ಷರ ಅಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ತಡೆಯಾಜ್ಞೆ ತೆರವಿನ ನಂತರ  ಸರ್ಕಾರ ತೆಗೆದುಕೊಳ್ಳುವ  ಪ್ರವರ್ಗ  ನಿರ್ದಾರದ ನಂತರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅಯ್ಕೆ  ಮುಂದುವರೆಯಲಿದೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close