ಭದ್ರ ನಂತರ ತುಂಗ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ



ಸುದ್ದಿಲೈವ್/ಶಿವಮೊಗ್ಗ


ಭದ್ರ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ಮತ್ತೊಂದು ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. 


ತುಂಗನದಿ ಜಲಾಶಯದ ಸುತ್ತಮುತ್ತ 500 ಮೀಟರ್ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದ್ದು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಜಲಾಶಯಕ್ಕೆ ನಿರಂತರವಾಗಿ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ. 


ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ತುಂಗ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ  ಹೊರಡಿಸಿದ್ದಾರೆ. ತುಂಗ ಜಲಾಶಯಕ್ಕೆ ಒಳಹರಿವು ಏರಳಿತ ಕಂಡಿವೆ. ಇವತ್ತಿಗೂ 30-40 ಸಾವಿರ ಕ್ಯೂಸೆಕ್ ನೀರು‌ ಹರಿದು ಬರುತ್ತಿದೆ ಹಾಗಾಗಿ ಜಲಾಶಯದ ಸುತ್ತಮುತ್ತ ಆದೇಶಿಸಿದ್ದಾರೆ.


ಇದನ್ನೂ ಓದಿ-https://www.suddilive.in/2024/08/blog-post_9.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close