ಡಾ.ಶಿವಕುಮಾರ್ ಶಿವಾಚಾರ್ಯ ಸ್ವಾಮಿಗಳ ಪೀಠ ತ್ಯಾಗದ ಬಗ್ಗೆ ಭಕ್ತವೃಂಧ ಹೇಳಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತಾಲೂಕಿನಲ್ಲಿ ತರಳಬಾಳು ಜಗದ್ಗುರು 1108 ನೇ ಡಾ.ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಯಲವಟ್ಟಿ ಗ್ರಾಮದಿಂ 101 ಕ್ವಿಂಟಾಲ್ ಅಕ್ಕಿ ಕಳುಹಿಸಲಾಗುತ್ತಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ತರಳಬಾಳು ಸೇವಾ ಸಮಿತಿಯ ಷಣ್ಮುಖಪ್ಪ ಮಾತನಾಡಿ, 2006-07 ರಿಂದ ಭಕ್ತಿ ಸಮಾರ್ಪಣಾ ಕಾರ್ಯಕ್ರಮ ಆರಂಭವಾಗಿದೆ. ಭಕ್ತಿ ಸಮರ್ಪಣ ಕಾರ್ಯಕ್ರಮದಲ್ಲಿ 100 ಕ್ವಿಂಟಲ್ ಅಕ್ಕಿ ಕಳುಹಿಸಲಾಗುವುದು. 


ಹರಮಘಟ್ಟದಿಂದ ಆರಂಭವಾಗಿತ್ತು. ಹೊಳಲೂರು ಆಲ್ದಳ್ಳಿ ಸೋಮಿನಕೊಪ್ಪ, ಕೊಮ್ಮನಾಳ್,  ನುಗ್ಗಿ ಮಲ್ಲಾಪುರ,ಮಂಡಘಟ್ಟ, ಕುಂಸಿ, ಸೂಗೂರು, ಕುಂವನಹಳ್ಳಿ, 2020-21 ರಲ್ಲಿ ಕೊರೋನ ಬಂದ ಕಾರಣ ನಡೆದಿರಲಿಲ್ಲ  ಹಾಡೋನ ಹಳ್ಳಿ, ಗೊಂಧಿ ಚಟ್ನಹಳ್ಳಿ ಯಲ್ಲಿ ನಡೆದ ಕಾರ್ಯಕ್ರಮ 2024 ರಂದು ಯಲವಟ್ಟಿಯಲ್ಲಿ  ನಡೆಸಲಾಗುತ್ತಿದೆ.‌


ಯಲವಟ್ಟಿ ಗ್ರಾಮದಲ್ಲಿ ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ, ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬೆಕ್ಕಿನಕಲ್ಮಠದ ಎಅ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ಚಾಮಿಗಳಿಙದ ಧರ್ಮಸಭೆ ನಡೆಯಲಿದೆ ಎಂದರು. 


ಪೀಠ ತ್ಯಾಗದ ಬಗ್ಗೆ ಮಾತಕತೆ ನಡೆಯುತ್ತಿದೆ. 9 ಕೋಟಿಯಿಂದ ನಡೆಸಿದ ಮಠವನ್ನ ಸ್ವಾಮಿಗಳು ಸಾವಿರ ರೂ. ಆಸ್ತಿ ಮಾಡಿದ್ದಾರೆ. ಭಕ್ತರು ಮತ್ತು ಸಮಿತಿಯು ಹೇಳುವವರನ್ನ ಶಿಷ್ಯರನ್ನಾಗಿ ಮಾಡಲಾಗುತ್ತಿದೆ. ಡಾ.ಶಿವಮೂರ್ತಿ ಸ್ವಾಮಿಗಳು, ರೈತರಿಗೆ ನೀರುಕೊಡಿಸಿದ, ಊಟ ಹಾಕಿ ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದ ಷಣ್ಮುಖ ರೆಸಾರ್ಟ್ ನಲ್ಲಿ ನಡೆಯುವ ಮಠವಲ್ಲ. ಮಠಕ್ಕೆ ಬಂದು ಏನಿದೆ ಕೇಳಲಿ ಎಂದು ಸ್ವಾಮೀಜಿನೇ ಹೇಳಿದ್ದಾರೆ. 


ಒಂದು ಬಣ ಡಾ.ಶಿವಮೂರ್ತಿ ಶಿವಾಚಾರ್ಯರ ಪೀಠ ತ್ಯಾಗಕ್ಕೆ ಒತ್ತಡ ಹಾಕುತ್ತಿದೆ. ಅಹವಾಲು ಇದ್ದರೆ ಮಠಕ್ಕೆ ಬಂದು ಮಾತನಾಡಬೇಕು. ಶ್ಯಾಮನೂರು ಶಿವಶಂಕರಪ್ಪನವರು ಒಂದು ಸಭೆಗೆ ಭಾಗಿಯಾಗಿದ್ದರು. ಈಗಲೂ ಸರಿ ಮಾಡಿಕೊಳ್ಳಲು ಅವಕಾಶವಿದೆ. ಯಲವಟ್ಟಿಯ 70 ಹಳ್ಳಿ ಭಕ್ತರು ನಾಳೆ ಮಠಕ್ಕೆ ಭೇಟಿ ನೀಡಲಾಗುತ್ತಿದೆ. 70 ಹಳ್ಳಿಯ ಭಕ್ತರು ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close