ಅಪ್ರಾಪ್ತಳಿಗೆ ಮದ್ಯ ಕುಡಿಸಿದ ಘಟನೆ-ಹಿಂದೂ ಸಂಘಟನೆಯಿಂದ ನಾಳೆ ಪ್ರತಿಭಟನೆ


 

ಸುದ್ದಿಲೈವ್/ಶಿವಮೊಗ್ಗ

ಅಪ್ರಾಪ್ತ ಬಾಲಕಿಗೆ ಆಕೆಯ ತಾಯಿ ಮತ್ತು ಅವರ ಸ್ನೇಹಿತ ಮದ್ಯಪಾನ ಮಾಡಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಈ ಘಟನೆ ಕುರಿತಂತೆ ಅಪ್ರಾಪ್ತ ಬಾಲಕಿಗೆ ಮದ್ಯಪಾನ ಮಾಡಿಸಿ ಆಕೆಯ ಕೊಲೆಗೆ ಯತ್ನಿಸಿದ ಘಟನೆ ವಿರುದ್ಧ ಹಿಂದೂ ಸಂಘಟನೆ ತೀವ್ರವಾಗಿ ಖಂಡಿಸಿದೆ. ಅಪ್ರಾಪ್ತೆ ಬಾಲಕಿಗೆ ಮದ್ಯಪಾನ ಮಾಡಿಸಿರುವುದು ಅನ್ಯಕೋಮಿನ ವ್ಯಕ್ತಿಯಾಗಿದ್ದರಿಂದ  ಘಟನೆಯ ವಿರುದ್ಧ ನಾಳೆ ಹಿಂದೂ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close