ಪುರಲೆ ಗ್ರಾಮದ ಇ-ಸ್ವತ್ತು ಗೊಂದಲ ಬಗೆಹರಿಸುವಂತೆ ಮನವಿ



ಸುದ್ದಿಲೈವ್/ಶಿವಮೊಗ್ಗ

ಹೊಳೆಬೆನವಳ್ಳಿ ಗ್ರಾಮಪಂಚಾಯಿತಿಯ ಪುರಲೆ ಗ್ರಾಮದಲ್ಲಿರುವ ಕಟ್ಟಡ, ನಿವೇಶನ ಮತ್ತು ವಾಣಿಜ್ಯ ಸಂಕಿರ್ಣಗಳು ಶಿವಮೊಗ್ಗ ಮಹಾನಗರ ಪಾಲಿಕೆ ಇ-ಸ್ವತ್ತಿಗೆ ಬರಲಿದ್ದು ಈ ಕುರಿತು ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. 

ಪಾಲಿಕೆ ವ್ಯಾಪ್ತಿಗೆ ಪುರಲೆ ಗ್ರಾಮ ಬರುವುದರಿಂದ ಪಾಲಿಕೆ ನಿಯಮದಂತೆ ಕಂದಾಯ, ನೀರಿನ ಬಿಲ್ ಗಳನ್ನ ಕಟ್ಟಿಕೊಂಡು ಬರುತ್ತಿದ್ದೇವೆ. ಇ-ಸ್ವತ್ತು ನೀಡಲು ಪಾಲಿಕೆ ಅಧಿಕಾರಿಗಳು ನಿಮ್ಮದು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿತ್ತಿದ್ದು ಗೊಂದಲಗಳನ್ನ ಮೂಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. 

ಇ-ಸ್ವತ್ತು ಗೊಂದಲವಾಗಿರುವುದರಿಂದ ಬ್ಯಾಂಕ್ ಸಾಲಗಳು ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ ಮತ್ತು ಇನ್ನಿತರ ವಹಿವಾಟುಗಳು ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಪುರಲೆ ಗ್ರಾಮದ ಈ ಗೊಂದಲಗಳನ್ನ ಸರಿಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. 

40 ಸಾವಿರ ಇ-ಸ್ವತ್ತು-ಆಯುಕ್ತೆ

ನ.7 ರಿಂದ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೊಳಿಸಿದ ಬೆನ್ನಲ್ಲೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿವೇಶನ ನೋಂದಣಿ ಪ್ರಕ್ರಿಯಿ ಸ್ಥಗಿತಗೊಂಡಿತು. ಸಾರ್ವಜನಿಕರಿಗೆ ಇ-ಸ್ವತ್ತು ಇಲ್ಲದ ಕಾರಣ ಬ್ಯಾಂಕ್ ನಲ್ಲಿ ಮಾರ್ಟಗೇಜ್ ಸಾಲ ಸ್ಥಗಿತಗೊಂಡಿತ್ತು. 

ಆದರೆ ಈ ಕುರಿತು ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ಮನವಿ ಕೊಟ್ಟಾಗ ಪಾಲಿಕೆ ಆಯುಕ್ತರು ಒಂದು ತಿಂಗಳಲ್ಲಿ 40 ಸಾವಿರ ಖಾತೆಗಳು ಇ-ಸ್ವತ್ತು ಆಗಿದೆ ಎಂದರು. 

ಮೂರು ವಿಭಾಗೀಯ ಕಚೇರಿಗಳು ಆರಂಭ

ಇ-ಸ್ವತ್ತು ಗೊಂದಲಗಳು ಹೆಚ್ಚಾದ ಬೆನ್ನಲ್ಲೇ ಪಾಲಿಕೆ ವತಿಯಿಂದ ಮೂರು ಕಡೆ ಪಾಲಿಕೆಯ ವಿಭಾಗೀಯ ಕಚೇರಿಗಳು ಆರಂಭಮಾಡಲು ನಿರ್ಧರಿಸಿದ್ದು ಇದನ್ನ 15 ದಿನಗಳಲ್ಲಿ ಶುರು ಮಾಡುವುದಾಗಿ ಭರವಸೆ ನೀಡಿದರು‌. ಅಲ್ಲದೆ ಆಯುಕ್ತರು ಯಾರಿಗೆ ತ್ವರಿತವಾಗಿ ಮಾರ್ಟಗೇಜ್ ಸಾಲ ಬೇಕಾಗಿದೆಯೋ ಅವರು ಬಂದು ಇ-ಸ್ವತ್ತು ಮಾಡಿಸಿಕೊಳ್ಳಿ. ಉಳಿದವರು ನಿಧಾನವಾಗಿ ಮಾಡಿಸಿಕೊಳ್ಳಲು ಮನವಿ ಮಾಡಿದ್ದಾರೆ. 

ಮನವಿ ನೀಡುವ ಸಂಧರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಮಹೇಶ್ವರಪ್ಪ, ಬಿಜೆಪಿ ನಗರ ಘಟಕ ಉಪಾಧ್ಯಕ್ಷ ಧೀನ್ ದಯಾಳು, ಪಾಲಿಜೆ ಸದಸ್ಯ ಪ್ರಭು, ಕಿರಣ್ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close