Suddilive || Rippenpete
ಮೆಸ್ಕಾಂಗೆ ಇನ್ನೆಷ್ಟು ಬಲಿ ಬೇಕು? (Young Man died while repairing the electricity line)
ವಿದ್ಯುತ್ ಕಂಬ ಹತ್ತಿ ಲೈನ್ ದುರಸ್ತಿ ಮಾಡುತಿದ್ದ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಸಮೀಪದ ಬಿಳಿಕಿ ಗ್ರಾಮದಲ್ಲಿ ನಡೆದಿದೆ.
ಗಾಜೀನಗೋಡು ಗ್ರಾಮದ ಕೇಶವ್(28) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ.ಬಿಳಿಕಿ ಗ್ರಾಮದಲ್ಲಿ ವಿದ್ಯುತ್ ಕಂಬ ಹತ್ತಿ ಲೈನ್ ದುರಸ್ಥಿ ಮಾಡುತಿದ್ದ ಗುತ್ತಿಗೆ ಮೆಸ್ಕಾಂ ಪವರ್ ಮ್ಯಾನ್ ಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಗಳಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.
ಮೃತದೇಹವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪವರ್ ಮ್ಯಾನ್ ಗಳ ಸಾವುಗಳು ಹೀಗೆ ದುರಂತದಲ್ಲಿ ಅಂತ್ಯಗೊಳ್ಳುತ್ತಿದ್ದರು ಇಲಾಖೆ ಕ್ರಮ ಜರುಗಿಸದೆ ಬೇಕಾ ಬಿಟ್ಟಿ ಕೆಕಸ ಮಾಡಿಸಿಕೊಳ್ಳುತ್ತಿರುವುದು ಮುಂದು ವರೆದಿದೆ.
ಇನ್ನೂ ಎಷ್ಟು ಬಲಿ ತೆಗೆದುಕೊಂಡ ಮೇಲೆ ಕ್ರಮ ಜರುಗಲಿದೆ ಎಂಬುದನ್ನ ಮೆಸ್ಕಾಂ ಸ್ಪಷ್ಟಪಡಿಸಬೇಕು.
Conclusion-Repairy, Electricity line