Suddilive || Shivamogga
Doctorate conferred on Smt.Kavya-ಶ್ರೀಮತಿ ಕಾವ್ಯ ಅವರಿಗೆ ಡಾಕ್ಟರೇಟ್ ಪ್ರದಾನ
ಕುವೆಂಪು ವಿಶ್ವವಿದ್ಯಾನಿಲಯವು ಶ್ರೀಮತಿ ಕಾವ್ಯ ಕೋಂ ಟಿ.ಎಸ್. ಯೋಗೀಶ್ ಇವರಿಗೆ “ಸಂಸ್ಕೃತದಲ್ಲಿ ಭಾಸನ ಏಕಾಂಕ ನಾಟಕಗಳ ವಿಮರ್ಶಾತ್ಮಕ ಅಧ್ಯಯ” ಎಂಬ ವಿಷಯದ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಎಂ.ಎ. ಶೃತಿಕೀರ್ತೀ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರೌಢಪ್ರಬಂಧಕ್ಕೆ ಡಾಕ್ಟರೇಡ್ ಪದವಿ ನೀಡಿ ಗೌರವಿಸಿದೆ.
ಕಾವ್ಯರವರು ಶಿವಮೊಗ್ಗದ ಸಂಸ್ಕೃತ ಪಂಡಿತ ಡಾ. ಸಿ. ರೇಣುಕಾರಾಧ್ಯ ಇವರ ಪುತ್ರಿಯಾಗಿದ್ದು, ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಪಾಠಶಾಲೆ, ಶ್ರೀ ಬೆಕ್ಕಿನಕಲ್ಮಠದಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ.
Doctorate conferred on Smt Kavya