Suddilive || Bhadravathi
ಇತಿಹಾಸ ಪ್ರಸಿದ್ದ ದೇವಸ್ಥಾನದ ಆವರಣ ಸ್ವಚ್ಛತೆ-Cleanliness of the historic temple premises
ಭದ್ರಾವತಿಯಲ್ಲಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ದೇವಸ್ಥಾನದ ಆವರಣವನ್ನ ಸ್ವಚ್ಛಗೊಳಿಸಲಾಗಿದೆ. ಭದ್ರಾವತಿಯ ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಇಂದು ಸ್ವಚ್ಛತಾಕಾರ್ಯದಲ್ಲಿ ತೊಡಗಿದ್ದರು.
ಭಜರಂಗದಳದ ಸೇವಾ ಸಾಪ್ತಾಹದ ಅಂಗವಾಗಿ 33ನೇ ವಾರದ ದೇವಸ್ಥಾನ ಸ್ವಚ್ಛತಾ ಸೇವಾ ಕಾರ್ಯಕ್ರಮ ಪ್ರತಿ ಭಾನುವಾರದಂತೆ ಈ ಭಾನುವಾರವೂ ಕೂಡ ಭದ್ರಾವತಿ ನಗರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ.
ದೇವಸ್ಥಾನದ ಹೊರ ಆವರಣದ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಿ, ಪ್ಲಾಸ್ಟಿಕ್ ಮುಕ್ತವಾಗಿಸಿ ಸ್ವಚ್ಛತೆ ಮಾಡಲಾಯಿತು ಈ ಸೇವಾ ಕಾರ್ಯದಲ್ಲಿ ಹ ರಾಮಪ್ಪ, ಡಿ ಆರ್ ಶಿವಕುಮಾರ್,ರೇಣುಕಯ್ಯ, ಕಿರಣ್ ಸುರಗಿತೋಪು, ಆಕಾಶ್, ಗಣೇಶ್, ಅಭಿ, ಅಚ್ಚು, ನವೀನ್ ಬಾರಂದೂರು, ನರಸಿಂಹ, ಪೂಜಿತ್, ಮುರಳಿ ಮತ್ತು ಸ್ಥಳೀಯ ಕಾರ್ಯಕರ್ತರು ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.
Cleanliness of the historic temple premises