ಅಪಾಯದಂಚಿನ ಪ್ರಬೇಧ ಕೊಂಡುಕುರಿ(ನಾಲ್ಕು ಕೊಂಬಿನ ಜಿಂಕೆ) ರಕ್ಷಣೆ-Protection of the endangered species of four-horned deer

 Suddilive || shivamogga

ಅಪಾಯದಂಚಿನ ಪ್ರಬೇಧ ಕೊಂಡುಕುರಿ(ನಾಲ್ಕು ಕೊಂಬಿನ ಜಿಂಕೆ) ರಕ್ಷಣೆ-Protection of the endangered species of four-horned deer

Deer, protection

ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಮೋಹನ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರ ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಒ) ಬಿ ರೇವಣಸಿದ್ದಯ್ಯ ಮತ್ತು ಅವರ ತಂಡವು ಹಾವೇರಿಯ ಹಿರೇಕೆರೂರು ಮತ್ತು ಶಿವಮೊಗ್ಗ ಜಿಲ್ಲೆಗಳ ನಡುವಿನ ಗಡಿಯಲ್ಲಿ ಹಬ್ಬಗಳ ನಂತರದ ಬೇಟೆಯನ್ನು ತಡೆ ಮೇಲ್ವಿಚಾರಣೆ ನಡೆಸುತ್ತಿತ್ತು. ಶನಿವಾರ ಕಾಗೇನಹಳ್ಳಿ ರಾಜ್ಯ ಅರಣ್ಯದ ಬಳಿಯ ಕೃಷಿ ಹೊಲದಿಂದ ಎರಡು ನಾಲ್ಕು ಕೊಂಬಿನ ಜಿಂಕೆ (ಟೆಟ್ರಾಸೆರಸ್ ಕ್ವಾಡ್ರಿಕಾರ್ನಿಸ್) ಅಥವಾ ಕೊಂಡುಕುರಿ ಮರಿಗಳನ್ನು ಯಶಸ್ವಿಯಾಗಿ ರಕ್ಷಿಸಿತು. ಸುಮಾರು ಐದು-ಆರು ತಿಂಗಳ ವಯಸ್ಸಿನ ಮರಿಗಳು ಭತ್ತದ ಗದ್ದೆಯ ಬಳಿ ಪತ್ತೆಯಾಗಿವೆ ಎಂದು ಆರ್‌ಎಫ್‌ಒ ರೇವಣಸಿದ್ದಯ್ಯ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಧಿಕಾರಿಗಳು ಪ್ರದೇಶವನ್ನು ಪರಿಶೀಲಿಸಿದರು ಮತ್ತು ಅವುಗಳನ್ನು ಕೊಂಡುಕುರಿ ಎಂದು ದೃಢಪಡಿಸಿದರು. ಸದ್ಯ ಶಿವಮೊಗ್ಗ ಮೃಗಾಲಯಕ್ಕೆ ಇವುಗಳನ್ನ ವರ್ಗಾಯಿಸಲಾಯಿಸಲಾಗಿದೆ. ಜಗಳೂರು, ದಾವಣಗೆರೆ ಮತ್ತು ಕಲಬುರಗಿ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪ್ರಭೇದ ಕಾಣಸಿಗುತ್ತೆ. 

ಮೃಗಾಲಯದ ಪಶುವೈದ್ಯರಾ ಮುರುಳಿ ಮನೋಹರ್ ಅವರ ಆರೈಕೆಯಲ್ಲಿ ಕೊಂಡುಕುರಿಗಳಿವೆ.

ಈ ಬಗ್ಗೆ ಮಾತನಾಡಿದ ವೈದ್ಯರು, CITES ನ ಅನುಬಂಧ III (ಅಳಿವಿನಂಚಿನಲ್ಲಿರುವ ಕಾಡು ಸಸ್ಯ ಮತ್ತು ಪ್ರಾಣಿಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ) ದಲ್ಲಿ ಪಟ್ಟಿ ಮಾಡಲಾಗಿದೆ ಎಂದು ವಿವರಿಸಿದರು. ಅವು ಸಾಮಾನ್ಯವಾಗಿ ಕುರುಚಲು ಕಾಡಿನಲ್ಲಿ ವಾಸಿಸುತ್ತವೆ.  ಎರಡೂ ಮರಿಗಳು ಆರೋಗ್ಯವಾಗಿವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close