SUDDILIVE || SHIVAMOGGA
ಪಾಕ್ ಪರ ಮಾತನಾಡುವವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು-ಮಾಜಿ ಡಿಸಿಎಂ ಈಶ್ವರಪ್ಪ-A law should be introduced to shoot to death those who speak in favor of Pakistan - Former DCM Eshwarappa
ದೇಶದ ಬಗ್ಗೆ ಮಾತನಾಡುವವರನ್ನ ಮತ್ತು ಪಾಕ್ ಪರ ಮಾತನಾಡುವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಮಾಜಿ ಡಿಸಿಎಂ ಈಶ್ವರಪ್ಪ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ತಾನ ಎಂದು ಹೇಳಿದ್ದಾರೆ. ಮೂವರು ಈ ಪ್ರಕರಣದಲ್ಲಿ ಬುದ್ದಿ ಬ್ರಮಣೆಯಲ್ಲಿದ್ದಾರೆ. ಯುದ್ದ ಬೇಡ ಎಂದವರು ಆಪರೇಷನ್ ಸಿಂದೂರ ನಡೆದ ತಕ್ಷಣ ಹಣೆಗೆ ಸಿಂದೂರ ಇಟ್ಟುಕೊಂಡು ಬಂದರು ಎಂದು ಸಿದ್ದರಾಮಯ್ಯನವರ ಹೆಸರು ಹೇಳದೆ ಘಟನೆಯನ್ನ ವಿವರಿಸಿದರು. ಈಗ ಸರಿಯಾಗಿದ್ದಾರೆ. ಇನ್ನೂ ಮರಿ ಖರ್ಗೆ, ಸಂತೋಷ್ ಲಾಡ್, ಕೊತ್ತೂರು ಮಂಜುನಾಥ ಇವರೆಲ್ಲ ಅರದ ಹುಚ್ಚರು.
ಸರ್ಕಾರದ ಪರವಾಗಿದ್ದ ಖರ್ಗೆ ದಿಡೀರ್ ಎಂದು ಬದಲಾಗಿದ್ದಾರೆ. ಇವರಿಗೆ ಪೂರ್ಣ ಹುಚ್ಚರಾಗಿದ್ದಾರೆ.
ಮೂರು ರೀತಿಯ ಹುಚ್ಚರಿದ್ದಾರೆ ಅರೆ ಹುಚ್ಚರನ್ನಣೆ ಆಗಿದ್ದಾರೆ. ದೇಶದ ಬಗ್ಗೆ ಹಗೂರವಾಗಿ ಮಾತನಾಡುವರನ್ನ ಹಾಗೂ ಪಾಕ್ ಪರ ಮಾತನಾಡುವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು. ಅಲ್ಲಿಯ ವರೆಗೆ ಸರಿಯಾಗಲ್ಲ ಎಂದು ದೂರಿದರು.
ನಟಿ ರನ್ಯಾ ಪ್ರಕರಣದಲ್ಲಿ ಗೃಹ ಸಚಿವರ ಮೆಡಿಕಲ್ ಕಾಲೇಜಿನ ಮೇಲೆ ಇಡಿ ರೈಡ್ ಆಗಿದೆ. ನಟಿಗೆ ಬೇಲ್ ಸಿಕ್ಕಿದೆ. ಯಾವ ಸೆಕ್ಷನ್ ಅಡಿ ಅವರಿಗೆ ಬೇಲ್ ಸಿಕ್ಕಿದೆ. ಕೋರ್ಟ್ ನ ಬಗ್ಗೆ ಅನುಮಾನ ಬರುತ್ತೆ ಎಂದರು.