SUDDILIVE || SAGARA
RCB ಟೀಗೆ ಸಕ್ಕತ್ ರೆಸ್ಪಾನ್ಸ್-Big response to RCB Tea
ಆರ್ಸಿಬಿಯ ಅಭಿಮಾನಿಯಿಂದ ವಿಭಿನ್ನ ಪ್ರಯತ್ನ ನಡೆದಿದೆ. ಆರ್ಸಿಬಿ ತಂಡ ಕ್ವಾಲಿಫೈ ಆದ ಹಿನ್ನೆಲೆ ಉಚಿತ ಟೀ ವಿತರಿಸಲು ಅಭಿಮಾನಿಯೊಬ್ವರು ಮುಂದಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಉಚಿತ ಟೀಯನ್ನ ಆರ್ಸಿಬಿ ಅಭಿಮಾನಿ ವಿತರಿಸಿ ಅಭಿಮಾನ ಮೆರೆದಿದ್ದಾರೆ. ಸಾಗರದ ಬಿ.ಎಚ್.ರಸ್ತೆಯಲ್ಲಿರುವ ಹೋಟೆಲ್ ಸದ್ಗುರು ನಲ್ಲಿ ಮಾಲೀಕ ಸಂತೋಷ್ ಸದ್ಗುರು ಜನರಿಗೆ ಉಚಿತ ಟೀ ಹಂಚಿದ್ದಾರೆ.
ಆರ್ಸಿಬಿ ಟೀ ಎಂದು ನಾಮಕರಣ ಮಾಡಿ ಚಹಾ ನೀಡುತ್ತಿರುವ ಆರ್ಸಿಬಿಯ ಅಭಿಮಾನಿ, ಈ ಹಿಂದೆ ಕೂಡ ಆರ್ಸಿಬಿಗಾಗಿ ವಿಭಿನ್ನ ರೂಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಈಗ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಉಚಿತ ಟೀ ವಿತರಣೆ ಮಾಡಲಾಗುತ್ತಿದೆ. ಸಂತೋಷ್ ಸದ್ಗುರು ಅವರ ವಿಭಿನ್ನ ಪ್ರಯತ್ನಕ್ಕೆ ಸಖತ್ ರೆಸ್ಪಾನ್ಸ್ ದೊರೆತಿದೆ. ಉಚಿತ ಆರ್ಸಿಬಿಯ ಟೀ ಸವಿಯಲು ಬೆಳಗ್ಗೆಯಿಂದ ಸಾರ್ವಜನಿಕರು ಧಾವಿಸಿದ್ದಾರೆ
Big response to RCB Tea