SUDDILIVE || SHIVAMOGGA
ದಂಡಂ ದಶಗುಣಂನ ಮಧ್ಯೆ ಸಂಚಾರಿ ಪೊಲೀಸರ ಮಹತ್ತರ ಕಾರ್ಯA great work of traffic police in the midst of Dandam Dashagunam
ದೇಶದಲ್ಲೇ ಟ್ರಾಫಿಕ್ ನಿಯಮಗಳನ್ನ ಗಾಳಿಗೆ ತೂರಿ ಬಹಳ ದಿನ ಕಳೆದಿದೆ. ದಂಡ ಒಂದೇ ಅದಕ್ಕೆ ಮಾನದಂಡವಾಗಿದೆ ಎಂಬ ತೀರ್ಮಾನಕ್ಕೂ ಬಂದು ಬಹಳ ದಿನ ಕಳೆದಿದೆ. ಅದರಲ್ಲೂ ಶಿವಮೊಗ್ಗದಲ್ಲಿ ದಿನೇ ದಿನೇ ವಾಹನಗಳು ರಸ್ತೆಗಿಳಿಯುತ್ತಿರುವುದು ಹೆಚ್ಚಾಗಿದೆ. ಆದರೆ ರಸ್ತೆ ಸಂಚಾರಿ ನಿಯಮಗಳು ಪಾಲನೆ ಮತ್ತು ಸುಧಾರಣೆ ಕಡಿಮೆಯಾಗಿದೆ.
ಮಿನಿಟ್ ಗಳ ಮೇಲೆ ಅಧಿಕಾರಿಗಳು ಕೆಲಸ ನಿಯೋಜನೆ ಅಂದ ಮೇಲೆ ಯಾವ ಕಾನೂನು ಪಾಲನೆಯಾಗಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಎಂದಿನಂತೆ ಉಷಾ ನರ್ಸಿಂಗ್ ಹೋಮ್ ಬಳಿ ಯದ್ವಾ ತದ್ವ ವಾಹನಗಳ ಸಂಚಾರದಿಂದ ದಟ್ಟಣೆ ಹೆಚ್ಚಾಗಿದೆ. ಸಧ್ಯಕ್ಕೆ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಮತ್ತು ಪಿಎಸ್ಐ ನವೀನ್ ಕುಮಾರ್ ಮಠಪತಿಯವರು ಇಲ್ಲೊಂದು ವಾಹನ ಸಂಚಾರಕ್ಕೆ ಅನುವಾಗಲು ಸಣ್ಣ ಪ್ರಯತ್ನ ಮಾಡಿದ್ದಾರೆ.
ದಂಡ ವಿಧಿಸುವುದೇ ಪೊಲೀಸರ ಕಾಯಕ ಎಂದು ಕೆಲ ಪೊಲೀಸರ ವರ್ತನೆಯ ಮಧ್ಯೆ ಇಬ್ಬರು ಅಧಿಕಾರಿಗಳು ಬೀದಿಗಿಳಿದು ಒಂದಿಷ್ಟು ಸಂಚಾರಿ ನಿಯಮ ಪಾಲಿಸುವ ಸೂಚನ ಫಲಕ ವಿಧಿಸಿದ್ದಾರೆ.
ಶಿವಮೊಗ್ಗ ನಗರದ ಅಕ್ಕಮಹಾದೇವಿ ಸರ್ಕಲ್ ( ಉಷಾ ನರ್ಸಿಂಗ್ ಹೋಂ ಸರ್ಕಲ್) ಹತ್ತಿರ ಇರುವ ರೈಲ್ವೇ ಪ್ಲೈ ಓವರ್ ಎಡಭಾಗ ಮತ್ತು ಬಲಭಾಗದ ಸರ್ವಿಸ್ ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಮತ್ತು ವಾಹನ ಸವಾರರಿಗೆ/ ಚಾಲಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ಎರಡು ಕಡೆ ಏಕಮುಖ ಸಂಚಾರ (ONE WAY) ಮತ್ತು ನೋ ಎಂಟ್ರಿ ( NO ENTRY) ಸೂಚನಫಲಕಗಳನ್ನು ಅಳವಡಿಸಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆಯಾದರೆ ದಂಡ ವಿಧಿಸೋದು ಸೂಕ್ತ.
Dandam Dashagunam