SUDDILIVE || BHADRAVATHI
ಮೂಲೆಕಟ್ಟೆಯಲ್ಲಿ ಸ್ಫೋಟಕ ವಸ್ತು ಸಿಡಿದು ಗೋವು ಸಾವು-Cow dies after explosive device explodes in Moolekatte
ಭದ್ರಾವತಿಯ ಬೊಮ್ಮನ್ ಕಟ್ಟೆಯ ಮೂಲೆಕಟ್ಟೆಯ ಬಳಿ ಸ್ಪೋಟಕ ವಸ್ತುವೊಂದು ಸಿಡಿದು ಮೇವಿಗೆ ಬಂದಿದ್ದ ಜಾಗುವಾರುವೊಂದು ಅಸು ನೀಗಿದೆ. ಎರಡು ಗೋವುಗಳು ಗಾಯಗೊಂಡಿದೆ.
ಮೂಲೆಕಟ್ಟೆಯ ಬಳಿ ಹಂದಿ ಹಿಡಿಯಲು ಬಳಸುವ ಸ್ಪೋಟಕ ವಸ್ತು ಸಿಡಿದ ಪರಿಣಾಮ ಮೇವಿಗೆ ಬಂದಿದ್ದ ಗೋವುಗಳು ಬಲಿಯಾಗಿದೆ. ಸಾವನ್ನಪ್ಪಿದ ಗೋವು ಬೊಮ್ಮನ್ ಕಟ್ಟೆಯ ಶಿವಕುಮಾರ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.
ಇನ್ನೆರಡು ಹಸುಗಳು ಗಾಯಗೊಂಡಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ನಾಗಮ್ಮನವರ ನೇತೃತ್ವದಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಹಂದಿ ಹಿಡಿಯಲು ಸ್ಪೋಟಕವಸ್ತುಗಳನ್ನ ಬಳಸಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
Cow dies after explosive device explodes in Moolekatte