SUDDILIVE ||SHIVAMOGGA
ಜಿಲ್ಲಾ ಉಸ್ತುವಾರಿ ಅಸಮರ್ಥ ಸಚಿವ ದಿನೇಶ್ ಗುಂಡೂರಾವ್ ರನ್ನ ಬದಲಿಸಿ-District in-charge Minister Dinesh Gundu Rao has been replaced.
ಮಂಗಳೂರಿನಲ್ಲಿ ಎಸ್.ಪಿ. ಮತ್ತು ಕಮಿಷನರ್ ಬದಲಾವಣೆ ಮಾಡಿದ ಹಾಗೆಯೇ ಜಿಲ್ಲಾ ಉಸ್ತುವಾರಿ ಅಸಮರ್ಥ ಸಚಿವ ದಿನೇಶ್ ಗುಂಡೂರಾವ್ ರವರನ್ನು ಬದಲಾಯಿಸಬೇಕೆಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರ ಮುಖಂಡರ ರಾಜೀನಾಮೆಗೆ ಹೆದರಿದರಾ ಗುಂಡೂರಾವ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘಪರಿವಾರದವರ ವಿರುದ್ಧ ಮಾತನಾಡಿದವರು ಮುಸ್ಲಿಂ ಸಂಘಟನೆ ಬಗ್ಗೆ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಕೇಳುವವರು ಮುಸ್ಲಿಂ ಧರ್ಮದ ಪುಸ್ತಕದ ಬಗ್ಗೆ ಮಾತನಾಡಲಿ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮಂತ್ರಿಯಾಗಿ ವಿಫಲತೆ ಕಂಡ ಗುಂಡೂರಾವ್ರವರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ?.
ಈಗ ಮಾತನಾಡುವ ತಾವು ಸುಹಾಸ್ ಶೆಟ್ಟಿ ಮತ್ತು ಇನ್ನಿತರೆ ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ನಿಮ್ಮ ಬುದ್ದಿ ಎಲ್ಲಿ ಹೋಗಿತ್ತು. ಕೊಲೆ ಅಂದರೆ ಕೊಲೆನೆ ಹಿಂದೂ ಮತ್ತು ಮುಸ್ಲಿಂ ಅನ್ನುವ ಬದಲಾಗಿ ಮಾನವೀಯತೆಯನ್ನೇ ಮರೆಯುತ್ತಿರುವ ನೀವುಗಳು ಮುಂದಿನ ದಿನಗಳಲ್ಲಿ ಇನ್ನೂ ಕೊಲೆಗಳು ಆಗಬಹುದು ಎನ್ನುವ ನಿಮಗೆ ಇಂಟಲಿಜೆನ್ಸ್ ರಿಪೋರ್ಟ್ ಕೊಟ್ಟವರ್ಯಾರು? ಜಿಲ್ಲಾ ಮಂತಿಯಾಗಿ ತಾವು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದೀರಾ? ಗುಂಡೂರಾವ್ ಇವರನ್ನು ಜಿಲ್ಲಾ ಮಂತಿಯ ಜವಾಬ್ದಾರಿಯಿಂದ ಹಿಂದಕ್ಕೆ ಪಡೆಯಬೇಕೆಂಬುದು ಸರ್ಕಾರಕ್ಕೆ ಅವರು ಆಗಹಿಸಿದ್ದಾರೆ.
Dinesh Gundu Rao has been replaced