SUDDILIVE || SHIVAMOGGA
ಹರಿಪ್ರಸಾದ್ ರನ್ನ ಮಂಗಳೂರಿಗೆ ಕಳುಹಿಸುವುದು ಕುರಿ ಕಾಯಲು ತೋಳವನ್ನು ನೇಮಿಸಿದಂತೆ-ಈಶ್ವರಪ್ಪ-Sending Hariprasad to Mangalore is like hiring a wolf to guard the sheep - Eshwarappa
ರಾಜ್ಯ ಸರ್ಕಾರ ಧರ್ಮ-ದೇಶ ಮತ್ತು ಸಂವಿಧಾನಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದನ್ನು ನಾವು ಹೇಳುತ್ತಿಲ್ಲ, ಬದಲಿಗೆ ಕೋರ್ಟ್ ಹೇಳುತ್ತಿದೆ. ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ. ಸಿಎಂ ಮಂಗಳೂರಿನಲ್ಲಿ ಮಾತನಾಡಿದಾಗ ಗಲಭೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು ಎಂದು ಹೇಳಿದರು.
ಆದರೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಮೊಕದ್ದಮೆ ಹಿಂತೆಗೆದುಕೊಳ್ಳುವ ನಿರ್ಧಾರ ಮತ್ತು ಇದರ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರಿಸಲಾಗಿದೆ. ಗಲಭೆಕೋರರನ್ನುಅಮಾಯಕರು ಎಂದು ಕರೆದಿರಿ. ಈಗ ಕೇಸ್ ಹಿಂಪಡೆಯುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ದೂರಿದರು.
ದೇಶದಲ್ಲಿ ಈ ರೀತಿ ಛೀಮಾರಿ ಹಾಕಿಸಿಕೊಂಡ ಏಕೈಕ ಸರ್ಕಾರ ನಿಮ್ಮದು. ಮಂಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯ ಕೊಲೆ ನಡೆದಿದೆ. ಇದಕ್ಕೂ ಮೊದಲು ಸುಹಾಸ್ ಶೆಟ್ಟಿ ಕೊಲೆ ನಡೆಯಿತು. ಇದನ್ನು ನಾನು ಒಪ್ಪುವುದಿಲ್ಲ, ಇದೀಗ ಸಿಎಂ ಸೇರಿದಂತೆ ಎಲ್ಲರೂ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಹಿಂದೆ ಸುಹಾಸ್ ಶೆಟ್ಟಿ ಕೊಲೆಯಾದಾಗ ಆತ ರೌಡಿ ಶೀಟರ್ ಮನೆಗೆ ಭೇಟಿ ನೀಡಬೇಕೆ ಎಂದು ಕೇಳಿದ್ದರು. ಆದರೆ ರನ್ಯಾ ಪ್ರಕರಣದಲ್ಲಿ ಗೃಹ ಸಚಿವರ ಶಿಕ್ಷಣ ಸಂಸ್ಥೆಯಿಂದಲೇ ಹಣ ಹೋಗಿತ್ತಲ್ಲ. ಹಾಗಾದರೆ ಆಕೆ ಸ್ಮಗ್ಲರ್ ಎಂದು ಗೊತ್ತಿರಲಿಲ್ಲವೇ?ಗಲಭೆ ಕೊಲೆ ನಂತರ ಮಂಗಳೂರಿನಲ್ಲಿ ಶಾಂತಿ ಕಾಪಾಡುವ ಮಾತನಾಡುತ್ತಿದ್ದಾರೆ. ಈಗಾಗಲೇ ಹಿಂದೂಗಳು ನಿಮ್ಮ ಕೈ ಬಿಟ್ಟಿದ್ದಾರೆ. ಇದೀಗ ಮುಸ್ಲಿಮರೂ ನಿಮ್ಮ ಕೈ ಬಿಡುತ್ತಾರೆ ಎಂಬ ಕಾರಣಕ್ಕೆ ಹೀಗೆ ಮಾತನಾಡುತ್ತಿದ್ದೀರಾ?
ಅರಮನೆ ಟಿಡಿಆರ್ ಪಾವತಿ ವಿಷಯದಲ್ಲಿ ಸರ್ಕಾರಕ್ಕೆ ರಿಲೀಫ್ ಸಿಕ್ಕಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೋರ್ಟ್ ಛೀಮಾರಿ ಹಾಕಿದ್ದು ತೃಪ್ತಿ ತರಲಿಲ್ಲವೇ. ನಿಮಗೆ ಅಸಮಾಧಾನವಿದ್ದರೆ ಹೈ ಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಎಂದರು.
ಗೂಂಡಾ ಮುಸ್ಲಿಮರ ಹಿತಕಾಯಲು ಕಾಂಗ್ರೆಸ್ ಬದ್ಧವಾಗಿದೆ. ಇದಕ್ಕೆ ರಾಜ್ಯದ ಜನತೆ ಸೂಕ್ತ ಉತ್ತರ ಕೊಡಲಿದ್ದಾರೆ. ಮಂಗಳೂರು ಕೊಲೆ ಪ್ರಕರಣದಲ್ಲಿ ಮುಸ್ಲಿಂ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಇದಾದ ನಂತರ ಕಾಂಗ್ರೆಸ್ ನಾಯಕರು ಭಯಗೊಂಡಿದ್ದಾರೆ. ಬಿ.ಕೆ.ಹರಿಪ್ರಸಾದ್ ರನ್ನು ಮಂಗಳೂರಿಗೆ ಕಳಿಸಲು ಸಿಎಂ ಬಯಸಿದ್ದಾರೆ ಎಂದುರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಿಂದ ಆಗುವುದಿಲ್ಲ ಎಂದು ಸಿಎಂಗೆ ಗೊತ್ತಾಗಿದೆ. ಹಾಗಾಗಿ ಬಿ.ಕೆ.ಹರಿಪ್ರಸಾದ್ ರನ್ನು ಮಂಗಳೂರಿಗೆ ಕಳಿಸಲು ಮುಂದಾಗಿದ್ದಾರೆ. ಇದು ಕುರಿ ಕಾಯಲು ತೋಳವನ್ನು ನೇಮಿಸಿದಂತಾಗಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದ ಮೂರು ಕಡೆ ಆ್ಯಂಟಿ ಕಮ್ಯೂನಲ್ ಪಡೆ ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. ಇದು ಸರಿಯಾದ ಕ್ರಮವಲ್ಲ. ಹೀಗೆ ಮಾಡುತ್ತಾ ಹೋದರೆ ಪ್ರತಿ ಜಿಲ್ಲೆಯಲ್ಲೂ ಸ್ಥಾಪನೆ ಮಾಡಬೇಕಾಗುತ್ತದೆ. ಅದರ ಬದಲು ಕಾಂಗ್ರೆಸ್ ನಾಯಕರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಪಥನ ಮೊದಲ ಹೆಜ್ಜೆ
ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸಿಎಂಗೆ ಡಿಸಿಎಂ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನವಾಗುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಅಧಿಕಾರಿಗಳ ವರ್ಗಾವಣೆ ಸಿಎಂ ಪರಮಾಧಿಕಾರ ಎನಿಸಿಕೊಂಡಿದೆ. ಅದನ್ನು ಡಿಸಿಎಂ ಪ್ರಶ್ನಿಸುತ್ತಾರೆ. ಮುಂದೆ ಇವರು ಸಿಎಂ ಆದರೆ ಹೀಗೆ ಮಾಡುತ್ತಾರಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
Sending Hariprasad Ranna to Mangalore