SUDDILIVE || SHIVAMOGGA
ಪಾಕ್ ಪ್ರಜೆಗಳನ್ನ ಹೊರದಬ್ಬಿ-ದತ್ತಾತ್ರಿ-Expel Pakistani citizens-Dattatreya
ಪೆಹಲ್ಗಾಮ್ ನಲ್ಲಿ ನಡೆದನರಮೇದಕ್ಕೆ ತಕ್ಕನಾದ ಉತ್ತರವನ್ನ ಪ್ರಧಾನಿ ಮೋದಿ ನೀಡಿದ್ದಾರೆ ಎಂದು ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ದತ್ತಾತ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26 ಜನರ ಸಿಂಧೂರವನ್ನ ಅಳಿಸುವ ಕೆಲಸವನ್ನ ಉಗ್ರರು ಮಾಡಿದ್ದರು. ಅದನ್ನ ಉಳಿಸುವ ಕೆಲಸವನ್ನ ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ. ಆಪರೇಷನ್ ಸಿಂಧೂರ ನಡೆಸಿದ ಸೈನಿಕರ ನೈತಿಕತೆ ಹೆಛಚಿಸಲು ಬಿಜೆಪಿ ಪ್ರಕೋಷ್ಠಗಳು ಧನ್ಯವಾದಗಳನ್ನ ತಿಳಿಸಿದರು.
ಐದು ರಾಜ ತಾಂತ್ರಿಕ ಯೋಜಬೆಗಳನ್ನ ರೂಪಿಸಿ ಪಾಕ್ ನ್ನ ಕಟ್ಟಿಹಾಕಲಾಗಿತ್ತು. ಪಾಕ್ ಪ್ರಜೆಯನ್ನ ದೇಶದಿಂದ ಹೊರದಬ್ಬುವುದು. ಸಿಂಧೂ ನದಿಯ ನೀರು ಹಂಚಿಕೆಯನ್ನ ತಡೆಯುವುದು. ಬಿಜೆಪಿ ಸರ್ಜಾರವಿರುವ ಇರುವ ರಾಜ್ಯದಲ್ಲಿ ಪಾಕ್ ಪ್ರಜೆಗಳನ್ನ ಹೊರದಬ್ಬಲಾಗಿದೆ. ಬಿಜೆಪಿ ಏತರ ಸರ್ಕಾರದ ರಾಜ್ಯದಲ್ಲಿ ಪಾಕ್ ನಿವಾಸಿಗಳನ್ನ ಉಳಿಸಿಕೊಂಡಿದೆ.
ಪಾಕ್ ಪ್ರಜೆಗಳು ಬಿಜೆಪಿ ಏತರ ರಾಜ್ಯದಲ್ಲಿ 100-50 ಜನ ಇರುವ ಶಂಕೆಯಿದೆ. ಪಾಕ್ ಪ್ರಜೆಗಳನ್ನು ದಬ್ಬಿ ಎಂದರೆ ಮುಸ್ಲಂರನ್ನ ದಬ್ಬುವಙತಾಗುತ್ತದೆ ಎಂಬ ಭಯದಿಂದ ರಾಜ್ಯದಲ್ಲಿಯೂ ಹೊರ ದಬ್ಬಲಾಗಿಲ್ಲ. 24 ಪ್ರಕೋಷ್ಠಗಳಿಂದ ರಾಜ್ಯಾದ್ಯಂತ ಪಾಕ್ ಪ್ರಜೆಗಳನ್ನ ಹೊರದಬ್ಬಲು ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತಿದೆ. ಅದಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ನನ್ನ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತಿದೆ ಎಂದರು.
ಇಡೀ ರಾಜ್ಯದಲ್ಲಿ ಪಾಕ್ ಪ್ರಜೆಗಳು ಎಷ್ಟಿದ್ದಾರೆ ಎಂಬ ಮಾಹಿತಿ ಇಲ್ಲ. ಗೃಹ ಸಚಿವರು 80 ಜನರಿದ್ದಾರೆ ಎಂದು ಅನುಮಾನದಲ್ಲಿ ಹೇಳಿದ್ದಾರೆ. ಅದು ಹೆಚ್ಚಿದೆ. ಸರಿಯಾದ ಸಂಖ್ಯೆಯನ್ನ ರಾಜ್ಯ ಸರ್ಕಾರ ಇಟ್ಟುಕೊಳ್ಳಬೇಕೆಂದರು.
Expel Pakistani citizens